Select Your Language

Notifications

webdunia
webdunia
webdunia
webdunia

ಅಮೀರ್, ಶಾರುಕ್, ದಿಲೀಪ್ ಕುಮಾರ್ ವಿಷದ ಹಾವುಗಳಂತೆ: ಶಿವಸೇನಾ ಸಚಿವ

ಅಮೀರ್, ಶಾರುಕ್, ದಿಲೀಪ್ ಕುಮಾರ್ ವಿಷದ ಹಾವುಗಳಂತೆ: ಶಿವಸೇನಾ ಸಚಿವ
ಮುಂಬೈ , ಬುಧವಾರ, 25 ನವೆಂಬರ್ 2015 (14:28 IST)
ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರಕಾರದಲ್ಲಿ ಸಚಿವರೊಬ್ಬರು, ಒಂದು ವೇಳೆ, ಅಮೀರ್ ಖಾನ್ ಭಾರತವನ್ನು ಪ್ರೀತಿಸದಿದ್ದಲ್ಲಿ ಪಾಕಿಸ್ತಾನಕ್ಕೆ ಹೋಗಬಹುದಾದರೆ ಹೋಗಲಿ. ಅಮೀರ್, ಶಾರುಕ್ ಮತ್ತು ದಿಲೀಪ್ ಕುಮಾರ್ ಹಾವುಗಳಂತೆ ಎಂದು ಕಿಡಿಕಾರಿದ್ದಾರೆ.
 
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಕುರಿತಂತೆ ದೇಶದಲ್ಲಿ ವಾಸಿಸುವ ಬಗ್ಗೆ ಭಯವಾಗುತ್ತಿದ್ದು ಕುಟುಂಬದೊಂದಿಗೆ ದೇಶವನ್ನು ತೊರೆಯಲು ನಿರ್ಧರಿಸಿದ್ದೆ ಎನ್ನುವ ಅಮೀರ್ ಖಾನ್ ಹೇಳಿಕೆಗೆ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ, ಪರಿಸರ ಖಾತೆ ಸಚಿವ ರಾಮದಾಸ್ ಕದಂ ಮಾತನಾಡಿ, ಒಂದು ವೇಳೆ, ಅವರು ಭಾರತವನ್ನು ಪ್ರೀತಿಸದಿದ್ದಲ್ಲಿ ಪಾಕಿಸ್ತಾನಕ್ಕೆ ಹೋಗಲಿ ಎಂದು ತಿರುಗೇಟು ನೀಡಿದರು. 
 
ಬಾಲಿವುಡ್ ನಟ ಅಮೀರ್ ಖಾನ್ ಹೇಳಿಕೆ ದೇಶದ್ರೋಹವಾಗಿದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
 
ದೇಶ ಅವರಿಗೆ ಎಲ್ಲವನ್ನೂ ಕೊಟ್ಟಿದ್ದರೂ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಿರುವ ಅಮೀರ್ ಖಾನ್, ಶಾರುಕ್ ಖಾನ್ ಮತ್ತು ದಿಲೀಪ್ ಕುಮಾರ್ ಹಾವುಗಳಂತೆ ಎಂದು ಗುಡುಗಿದರು. 
 
ದಿಲೀಪ್ ಕುಮಾರ್‌ನಿಂದ ಶಾರುಕ್ ಖಾನ್ , ಅಮೀರ್ ಖಾನ್ ಅವರಿಗೆ ದೇಶದ ಪ್ರತಿಯೊಬ್ಬ ನಾಗರಿಕರು ಪ್ರೀತಿಯನ್ನು ತೋರಿಸಿದ್ದಾರೆ. ಆದರೆ, ಅವರ ಹೇಳಿಕೆಯನ್ನು ನೋಡಿದಲ್ಲಿ ವಿಷಯುಕ್ತ ಹಾವುಗಳು ಎನ್ನುವ ಭಾವನೆ ಜನತೆಯಲ್ಲಿ ಮೂಡುತ್ತದೆ ಎಂದು ಸಚಿವ ರಾಮದಾಸ್ ಕದಂ ಹೇಳಿದ್ದಾರೆ. 
 

Share this Story:

Follow Webdunia kannada