Select Your Language

Notifications

webdunia
webdunia
webdunia
webdunia

ಈಡೇರದ ಸೆಲ್ವಂ ಬಯಕೆ

ಈಡೇರದ ಸೆಲ್ವಂ ಬಯಕೆ
ಬೆಂಗಳೂರು , ಮಂಗಳವಾರ, 30 ಸೆಪ್ಟಂಬರ್ 2014 (08:35 IST)
ಕಳೆದ ಸೋಮವಾರ ಜಯಲಲಿತಾ ಉತ್ತರಾಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಒ ಪನ್ನೀರ್‌ಸೆಲ್ವಂ ಜಯಾರವರನ್ನು ಭೇಟಿಯಾಗಿ ಅವರ ಆರ್ಶೀರ್ವಾದ ಪಡೆಯಲು ತಕ್ಷಣ ಬೆಂಗಳೂರಿಗೆ ದೌಡಾಯಿಸಿದರು. ನಿನ್ನೆ ರಾತ್ರಿಯೇ ಪರಪ್ಪರ ಅಗ್ರಹಾರ ತಲುಪಿದ ಅವರು ಮಾಜಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ವಿಶೇಷ ಅನುಮತಿಯನ್ನು ಪಡೆಯಲು ಪ್ರಯತ್ನಿಸದರಾದರೂ ಸಫಲರಾಗಲಿಲ್ಲ. 

ರಾತ್ರಿ ಖಾಸಗಿ ಹೊಟೆಲ್ ಒಂದರಲ್ಲಿ ತಂಗಿರುವ ಅವರು ಇಂದು ಮುಂಜಾನೆ ಜಯಲಲಿತಾರವರನ್ನು ಭೇಟಿಯಾಗಿ  ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಸಮಯದಲ್ಲಿ ಮೂವರು ಸಚಿವರು ಕೂಡ ಅವರಿಗೆ ಸಾಥ್ ನೀಡಲಿದ್ದಾರೆ. 
 
ಜಯಲಲಿತಾ ಅವರ ಪರಮ ನಿಷ್ಠ ಒ ಪನ್ನೀರ್‌ಸೆಲ್ವಂ ಅವರು ಸೋಮವಾರ, ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
 
ರಾಜಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಜಯಲಲಿತಾರವರನ್ನು ನೆನೆದು ಕಣ್ಣೀರು ಸುರಿಸುತ್ತ ಅವರು ಪ್ರಮಾಣ ವಚನ ಪಡೆದಿದ್ದರು.

Share this Story:

Follow Webdunia kannada