Select Your Language

Notifications

webdunia
webdunia
webdunia
webdunia

ಉಗ್ರರ ದಾಳಿ ಹಿನ್ನೆಲೆ: ಸಂಸತ್ ಭವನದ ಸುತ್ತಮುತ್ತ ಬಿಗಿ ಭದ್ರತೆ

ಉಗ್ರರ ದಾಳಿ ಹಿನ್ನೆಲೆ: ಸಂಸತ್ ಭವನದ ಸುತ್ತಮುತ್ತ ಬಿಗಿ ಭದ್ರತೆ
ನವದೆಹಲಿ , ಸೋಮವಾರ, 27 ಜುಲೈ 2015 (12:58 IST)
ಪಂಜಾಬ್‌ನ ಗುರುದಾಸಪುರದಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಸಂಸತ್ ಭವನ ಮತ್ತು ಅದರ ಹತ್ತಿರವಿರುವ ಬಳಿ ಇರುವ ಪ್ರಮುಖ ಸರ್ಕಾರಿ ಕಚೇರಿಗಳ ಸುತ್ತಮುತ್ತ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಪಾರ್ಲಿಮೆಂಟ್ ಸೂತ್ತಲೂ ಭದ್ರತಾ ಪಡೆಗಳ ದಂಡು ಜಮಾಯಿಸಿದ್ದು ಕಟ್ಟೆಚ್ಚರವನ್ನು ವಹಿಸಲಾಗಿದೆ.
 
ಇಂದು ಮುಂಜಾವು 5 ಗಂಟೆ ಸುಮಾರಿಗೆ ಸೈನಿಕರ ವೇಷದಲ್ಲಿದ್ದ ಉಗ್ರರು ಗುರುದಾಸಪುರದ ದೀನಾನಗರದಲ್ಲಿ ಬಸ್ಸೊಂದರಲ್ಲಿ ನುಗ್ಗಿ ಮನಬಂದಂತೆ ಗುಂಡಿನ ಸುರಿಮಳೆಗೈದು ನಂತರ ಪೊಲೀಸ್ ಠಾಣೆಯನ್ನು ಆಕ್ರಮಿಸಿಕೊಂಡಿದ್ದಾರೆ. 
 
ಘಟನೆಯಲ್ಲಿ ಒಟ್ಟು 12 ಜನರು ಮೃತಪಟ್ಟಿದ್ದು ಅದರಲ್ಲಿ 7 ಜನರು ಪೊಲೀಸರಾದರೆ, ಒಬ್ಬ ಉಗ್ರ ಸಹ ಹತನಾಗಿದ್ದಾನೆ. ಎನ್ಎಸ್‌ಜಿ ಕಮಾಂಡೋಗಳು ಮತ್ತು ಸೈನಿಕರು ಉಗ್ರರನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 
 
ಇನ್ನೊಂದೆಡೆ ಗುರುದಾಸಪುರ‌‌‌ ರೈಲ್ವೆ ಟ್ರ್ಯಾಕ್‌‌ ಮೇಲೆ ಸಜೀವ ಬಾಂಬ್‌ಗಳು ಪತ್ತೆಯಾಗಿವೆ.   

Share this Story:

Follow Webdunia kannada