ಪಂಜಾಬ್ನ ಗುರುದಾಸಪುರದಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಸಂಸತ್ ಭವನ ಮತ್ತು ಅದರ ಹತ್ತಿರವಿರುವ ಬಳಿ ಇರುವ ಪ್ರಮುಖ ಸರ್ಕಾರಿ ಕಚೇರಿಗಳ ಸುತ್ತಮುತ್ತ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಪಾರ್ಲಿಮೆಂಟ್ ಸೂತ್ತಲೂ ಭದ್ರತಾ ಪಡೆಗಳ ದಂಡು ಜಮಾಯಿಸಿದ್ದು ಕಟ್ಟೆಚ್ಚರವನ್ನು ವಹಿಸಲಾಗಿದೆ.
ಇಂದು ಮುಂಜಾವು 5 ಗಂಟೆ ಸುಮಾರಿಗೆ ಸೈನಿಕರ ವೇಷದಲ್ಲಿದ್ದ ಉಗ್ರರು ಗುರುದಾಸಪುರದ ದೀನಾನಗರದಲ್ಲಿ ಬಸ್ಸೊಂದರಲ್ಲಿ ನುಗ್ಗಿ ಮನಬಂದಂತೆ ಗುಂಡಿನ ಸುರಿಮಳೆಗೈದು ನಂತರ ಪೊಲೀಸ್ ಠಾಣೆಯನ್ನು ಆಕ್ರಮಿಸಿಕೊಂಡಿದ್ದಾರೆ.
ಘಟನೆಯಲ್ಲಿ ಒಟ್ಟು 12 ಜನರು ಮೃತಪಟ್ಟಿದ್ದು ಅದರಲ್ಲಿ 7 ಜನರು ಪೊಲೀಸರಾದರೆ, ಒಬ್ಬ ಉಗ್ರ ಸಹ ಹತನಾಗಿದ್ದಾನೆ. ಎನ್ಎಸ್ಜಿ ಕಮಾಂಡೋಗಳು ಮತ್ತು ಸೈನಿಕರು ಉಗ್ರರನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನೊಂದೆಡೆ ಗುರುದಾಸಪುರ ರೈಲ್ವೆ ಟ್ರ್ಯಾಕ್ ಮೇಲೆ ಸಜೀವ ಬಾಂಬ್ಗಳು ಪತ್ತೆಯಾಗಿವೆ.