Webdunia - Bharat's app for daily news and videos

Install App

ಪುತ್ರಶೋಕ: ಸಿದ್ದರಾಮಯ್ಯನವರನ್ನು ತಬ್ಬಿಕೊಂಡು ಅತ್ತ ಡಿವಿಎಸ್

Webdunia
ಮಂಗಳವಾರ, 2 ಆಗಸ್ಟ್ 2016 (07:43 IST)
ಸಾಮಾನ್ಯರಿರಲಿ, ಅರಸನಿರಲಿ ಹೆತ್ತು, ಹೊತ್ತ ಮಕ್ಕಳು ತಮ್ಮ ಕಣ್ಣ ಮುಂದೆ ಅಗಲಿದರೆ ಆಗುವ ನೋವು ಎಲ್ಲರಿಗೂ ಒಂದೇ. ಸಿಎಂ ಸಿದ್ದರಾಮಯ್ಯ ತಮ್ಮ 39 ವರ್ಷದ ಮಗನನ್ನು ಕಳೆದುಕೊಂಡು ಕಣ್ಣೀರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ , ಕೇಂದ್ರ ಸಚಿವ ಸದಾನಂದ ಗೌಡರು ಸಹ ಈ ನೋವನ್ನು ಕಂಡವರೇ , ಈಗಲೂ ಅದನ್ನು ಅನುಭವಿಸುತ್ತಿರುವವರೇ.

ಸಿಎಂ ಸಿದ್ದರಾಮಯ್ಯ ಹಿರಿಯ ಪುತ್ರ ರಾಕೇಶ್ ರೂಪದಲ್ಲಿ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಕಂಡಿದ್ದರೆ, 13 ವರ್ಷಗಳ ಹಿಂದೆ ಗತಿಸಿದ ತಮ್ಮ ಪ್ರೀತಿಯ ಮಗ ಕೌಶಿಕ್‌ನಲ್ಲಿ ಡಿವಿಎಸ್ ತಮ್ಮರಾಜಕೀಯ ಉತ್ತರಾಧಿಕಾರಿಯನ್ನು ಕಂಡಿದ್ದರು. ಆದರೆ ಅಪಘಾತದ ರೂಪದಲ್ಲಿ ಡಿವಿಎಸ್ ಮಗನನ್ನು ವಿಧಿ ಸೆಳೆದುಕೊಂಡಿತ್ತು.

ಮತ್ತೀಗ ಸಿಎಂ ಸಿದ್ದರಾಮಯ್ಯ ಕೂಡ ಇದೇ ಪುತ್ರಶೋಕವನ್ನು ಅನುಭವಿಸುತ್ತಿದ್ದಾರೆ.ಇಬ್ಬರ ನೋವು ಸಮಾನವಾಗಿರುವುದರಿಂದ ಡಿವಿಎಸ್, ಸಿಎಂ ಅವರ ಶೋಕದ ಆಳವನ್ನು ಇತರರಿಗಿಂತೂ ಹೆಚ್ಚು  ಅರ್ಥ ಮಾಡಿಕೊಳ್ಳಬಲ್ಲರು. ಇದೇ ಕಾರಣಕ್ಕೆ ನಿನ್ನೆ ರಾಕೇಶ್ ಶವಕ್ಕೆ ಪುಷ್ಪಗೌರವ ಅರ್ಪಿಸಲು ಬಂದ ಡಿವಿಎಸ್ ಕಂಬನಿಯನ್ನು ತಡೆ ಹಿಡಿಯದಾದರು. ಕಣ್ಣೀರು ಸುರಿಸುತ್ತಾ ಅಲುಗಾಡದೆ ನಿಂತಿದ್ದ ಸಿದ್ದರಾಮಯ್ಯನವರನ್ನುತಬ್ಬಿಕೊಂಡು ತಾವು ಕೂಡ ಅಳುತ್ತ ಸಮಾಧಾನ ಮಾಡುತ್ತಿದ್ದರು. ಅದಕ್ಕೆ ಮೌನವಾಗಿ ತಲೆಯಾಡಿಸುತಿದ್ದ ಸಿಎಂ ಕಣ್ಣೀರು ಸುರಿಸುತ್ತಾ ಹಾಗೆಯೇ ನಿಂತಿದ್ದರು.

ಕಾಂಗ್ರೆಸ್ ಹಿರಿಯ ನಾಯಕ ಸಚಿವ ಡಿ.ಕೆ. ಶಿವಕುಮಾರ್ ಸಹ ಸಿಎಂ ಅವರನ್ನು ಆಲಂಗಿಸಿಕೊಂಡು ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments