Select Your Language

Notifications

webdunia
webdunia
webdunia
webdunia

ಎಂ.ಎಂ,ಕಲಬುರ್ಗಿ ಹತ್ಯೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಿಲಿ:ಕರುಣಾನಿಧಿ

ಎಂ.ಎಂ,ಕಲಬುರ್ಗಿ ಹತ್ಯೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಿಲಿ:ಕರುಣಾನಿಧಿ
ಚೆನ್ನೈ , ಸೋಮವಾರ, 31 ಆಗಸ್ಟ್ 2015 (16:02 IST)
ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ, ಘಟನೆಯ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
 
ಶ್ರೇಷ್ಠ ಬರಹಹಗಾರರು, ಮೂಢನಂಬಿಕೆ ವಿರುದ್ಧ ಹೋರಾಟ ಮಾಡಿದ್ದ ಹಿರಿಯ ಸಾಹಿತಿ ಎಂ.ಎಂ.ಕಲಬುರ್ಗಿಯವರ ಹತ್ಯೆ ಕುರಿತಂತೆ ರಾಜ್ಯ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
 
ಹಿರಿಯ ಸಂಶೋಧಕರಾಗಿ ನೂರಾರು ವಚನಗ್ರಂಥಗಳು, ಅನೇಕ ಸಾಹಿತ್ಯಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದಂತಹ ಮಹಾನ್ ಯುಗಪುರುಷರಾದ ಕಲಬುರ್ಗಿಯವರಿಗೆ ಆರೋಪಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದು ಹೇಯ ಕೃತ್ಯ ಎಂದು ಬಣ್ಣಿಸಿದರು.
 
ರಾಜ್ಯ ಸರಕಾರ ಸ್ವಯಂಪ್ರೇರಣೆಯಿಂದ ಮಹಾನ್ ಸಾಹಿತಿಗಳಿಗೆ ಚಿಂತಕರಿಗೆ ರಕ್ಷಣೆ ಒದಗಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಆಗ್ರಹಿಸಿದ್ದಾರೆ.  

Share this Story:

Follow Webdunia kannada