Webdunia - Bharat's app for daily news and videos

Install App

ಹಣ ಏನು ಆಕಾಶದಿಂದ ಉದುರುತ್ತಾ? ಹಣದ ಮೂಲ ಬಹಿರಂಗಪಡಿಸಿ: ಸಹಾರಾಗೆ ಸುಪ್ರೀಂ ತಾಕೀತು

Webdunia
ಶುಕ್ರವಾರ, 2 ಸೆಪ್ಟಂಬರ್ 2016 (20:53 IST)
ಹೂಡಿಕೆದಾರರಿಗೆ ಮರಳಿಸಿದ 25 ಸಾವಿರ ಕೋಟಿ ರೂಪಾಯಿ ನಗದು ಹಣವಂತೂ ಆಕಾಶದಿಂದ ಉದುರುವುದಿಲ್ಲ  ತಂದಿರುವ ಹಣದ ಮೂಲವನ್ನು ಬಹಿರಂಗಪಡಿಸಿ ಎಂದು ಸುಪ್ರೀಂಕೋರ್ಟ್ ಸಹಾರಾ ಕಂಪೆನಿಗೆ ತಾಕೀತು ಮಾಡಿದೆ.  
 
ಸಹರಾ ಕಂಪೆನಿಗೆ ಹಣದ ಮೂಲ ಯಾವುದು? ಇತರ ಕಂಪೆನಿಗಳಿಂದ ಹಣ ಪಡೆದಿದ್ದೀರಾ? ಅಥವಾ ಇತರ ಯೋಜನೆಗಳಲ್ಲಿರುವ 24 ಸಾವಿರ ಕೋಟಿ ರೂಪಾಯಿ ಹಣ ಬಳಸಿಕೊಂಡಿದ್ದೀರಾ? ಬ್ಯಾಂಕ್‌ಗಳಿಂದ ವಿತ್‌ಡ್ರಾ ಮಾಡಿದ್ದೀರಾ? ಅಥವಾ ಆಸ್ತಿಯನ್ನು ಮಾರಾಟ ಮಾಡಿದ್ದೀರಾ? ಇದರಲ್ಲಿ ಒಂದಂತೂ ಸತ್ಯವಿರಬಹುದು. ಯಾಕೆಂದರೆ ಹಣವಂತೂ ಸ್ವರ್ಗದಿಂದ ಉದುರುವುದಿಲ್ಲ ಎಂದು ಪ್ರಶ್ನೆಗಳ ಸುರಿಮಳೆ ಹಾಕಿದೆ. 
 
ಹೂಡಿಕೆದಾರರಿಗೆ 25 ಸಾವಿರ ಕೋಟಿ ರೂಪಾಯಿಗಳ ನಗದು ಹಣ ಮರಳಿಸಿದ ನಿಮ್ಮ ಕಕ್ಷಿದಾರನ ಯೋಗ್ಯತೆಯ ಬಗ್ಗೆ ಕೋರ್ಟ್‌ಗೆ ಅನುಮಾನವಿಲ್ಲ. ಆದರೆ, ಸಂಪೂರ್ಣ ಪ್ರಕರಣ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಣದ ಮೂಲವನ್ನು ನ್ಯಾಯಾಲಯದ ಮುಂದೆ ತಿಳಿಸಿ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಸಹರಾ ಕಂಪೆನಿಯ ಪರ ವಕೀಲರಿಗೆ ಕೋರಿದ್ದಾರೆ. 
 
ನ್ಯಾಯಮೂರ್ತಿಗಳಾದ ಎ.ಆರ್.ದವೆ ಮತ್ತು ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 16 ಕ್ಕೆ ಮುಂದೂಡಿದ್ದು, ಅಂದು ಹಣ ಯಾವ ಮೂಲದಿಂದ ಬಂತು ಎನ್ನುವುದರಿಂದ ವಿಚಾರಣೆ ಆರಂಭವಾಗಲಿ ಎಂದು ನ್ಯಾಯಮೂರ್ತಿಗಳು ಸಹಾರಾ ಕಂಪೆನಿ ಪರ ವಕೀಲರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments