Select Your Language

Notifications

webdunia
webdunia
webdunia
webdunia

ಜಯಲಲಿತಾ ಸಮಾಧಿಗೆ ಮೂರು ಬಾರಿ ತಟ್ಟಿ ಚಿನ್ನಮ್ಮ ಶಶಿಕಲಾ ಶಪಥ ಮಾಡಿದ್ದು ಯಾರ ಬಗ್ಗೆ ಗೊತ್ತಾ?!

ಜಯಲಲಿತಾ ಸಮಾಧಿಗೆ ಮೂರು ಬಾರಿ ತಟ್ಟಿ ಚಿನ್ನಮ್ಮ ಶಶಿಕಲಾ ಶಪಥ ಮಾಡಿದ್ದು ಯಾರ ಬಗ್ಗೆ ಗೊತ್ತಾ?!
Chennai , ಗುರುವಾರ, 16 ಫೆಬ್ರವರಿ 2017 (09:47 IST)
ಚೆನ್ನೈ: ಪರಪ್ಪನ ಅಗ್ರಹಾರ ಜೈಲು ಪಾಲಾಗುವ ಮೊದಲು ತಮಿಳುನಾಡಿನ ಸಿಎಂ ಪಟ್ಟ ಕೈ ತಪ್ಪಿದ ಹತಾಶೆ ಚಿನ್ನಮ್ಮ ಶಶಿಕಲಾ ಮುಖದಲ್ಲಿ ಸ್ಪಷ್ಟವಾಗಿತ್ತು. ಅದೇ ದುಃಖದಲ್ಲಿ ಬೆಂಗಳೂರಿಗೆ ಬರುವ ಮುನ್ನ ಜಯಲಲಿತಾ ಸಮಾಧಿಗೆ ಮೂರು ಬಾರಿ ತಟ್ಟಿ ಶಪಥ ಮಾಡಿದ್ದರು. ಅದು ಯಾರ ವಿರುದ್ಧ?

 
ಜಯಲಲಿತಾ ಸಮಾಧಿಗೆ ನಮಸ್ಕರಿಸುವಾಗ ಬಾಯಿಯಲ್ಲಿ ಏನನ್ನೋ ಗೊಣಗಿಕೊಂಡು ರೋಷದಿಂದ ಶಶಿಕಲಾ ಮೂರು ಬಾರಿ ನೆಲಕ್ಕೆ ತಟ್ಟಿದ್ದರು. ಇದು ಎಲ್ಲೆಡೆ ಸುದ್ದಿಯಾಗಿತ್ತು. ಆಗ ಶಶಿಕಲಾ ಮುಖಲದಲ್ಲಿ ಹತಾಶೆಯಿತ್ತು. ಕಣ್ಣೀರಿತ್ತು. ಅಧಿಕಾರ ತಪ್ಪಿದ ರೋಷವಿತ್ತು.

ಶಶಿಕಲಾ ತಮಗೆ ಸಿಎಂ ಪಟ್ಟ ಕೈ ತಪ್ಪಲು ಕಾರಣವಾದ ತಮಿಳುನಾಡಿನ ಒಬ್ಬ ವ್ಯಕ್ತಿ ಮತ್ತು ಕೇಂದ್ರ ಸರ್ಕಾರದ ಇಬ್ಬರಿಗೆ ಹಿಡಿಶಾಪ ಹಾಕಿದರು ಎನ್ನಲಾಗಿದೆ. ಜತೆಗೆ ಅಮ್ಮನ ಸಮಾಧಿಗೆ ನಮಸ್ಕರಿಸಿ ನಿನ್ನ ಪಕ್ಷವನ್ನು ಒಡೆಯಲು ಬಿಡಲ್ಲ ಎಂದು ಶಪಥ ಮಾಡಿದರಂತೆ!

ತಮಿಳುನಾಡಿನಲ್ಲಿ ಪನೀರ್ ಸೆಲ್ವಂ ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದರು. ಇವರಿಗೆ ಕೇಂದ್ರ ಸರ್ಕಾರದ ಸಚಿವರಾದ ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಬೆಂಬಲವಿತ್ತು ಎಂಬ ಗುಸು ಗುಸು ಹಬ್ಬಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೂ ಮುನ್ನವೇ ಮಸಣ ಸೇರಿದ ವಧುವರ; ಅಷ್ಟಕ್ಕೂ ಆದದ್ದೇನು?