Webdunia - Bharat's app for daily news and videos

Install App

ಕಮಲವನ್ನೆತ್ತಿದ ಸರಬ್ಜಿತ್ ಸಹೋದರಿ

Webdunia
ಸೋಮವಾರ, 26 ಡಿಸೆಂಬರ್ 2016 (09:22 IST)
ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದ ಸರಬ್ಜಿತ್ ಸಹೋದರಿ ದಲ್ಬಿರ್ ಕೌರ್ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 
 
ಪಕ್ಷದ ಕಿಸಾನ್ ಮೋರ್ಚಾ ಆಯೋಜಿಸಿದ್ದ ಸಮ್ಮೇಳನವೊಂದರಲ್ಲಿ ಬಿಜೆಪಿ ಶಾಸಕ ಮತ್ತು ಪಂಜಾಬ್ ಸಚಿವ ಸುರ್ಜಿತ್ ಜ್ಯಾನಿ ಅವರ ಸಮ್ಮುಖದಲ್ಲಿ ಅವರು ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾದರು, ಎಂದು ಪಂಜಾಬ್ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರ್ವಿಂದರ್ ಸಿಂಗ್ ಹೇಳಿದ್ದಾರೆ. 
 
ಮಾಧ್ಯಮವರ ಬಳಿಯೂ ದಲ್ಬಿರ್ ಈ ವಿಷಯವನ್ನು ದೃಢೀಕರಿಸಿದ್ದಾರೆ. 
 
2005ರಿಂದ ಬಿಜೆಪಿ ಜತೆ ನಿಕಟವಾಗಿದ್ದ ದಲ್ಬಿರ್, ತಮ್ಮ ಸಹೋದರನನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡಿಸಲು ಹೋರಾಟ ಮಾಡುತ್ತಿದ್ದಾಗಲೇ ಅವರು ಬಿಜೆಪಿ ಸೇರುವ ಕುರಿತು ವರದಿಗಳು ಪ್ರಕಟವಾಗಿದ್ದವು. 
 
ಪಂಜಾಬ್- ಪಾಕ್ ಗಡಿಯ ಗ್ರಾಮದ ನಿವಾಸಿ ಸರಬ್ಜಿತ್ ರೈತನಾಗಿದ್ದು, ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ್ದ ಎನ್ನಲಾಗುತ್ತಿದೆ. ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಆತನನ್ನು ಬಂಧಿಸಿದ್ದ ಪಾಕ್ ಮರಣದಂಡನೆ ವಿಧಿಸಿತ್ತು. ತಮ್ಮ ಸಹೋದರನ ಬಿಡುಗಡೆಗಾಗಿ ದಲ್ಬಿರ್ ಉಗ್ರ ಹೋರಾಟ ನಡೆಸಿದ್ದರು. 2013ರ ಏಪ್ರಿಲ್ ತಿಂಗಳಲ್ಲಿ ಸರಬ್ಜಿತ್ ಬಿಡುಗಡೆಗೊಳ್ಳುತ್ತಾನೆ ಎನ್ನಲಾಗುತ್ತಿತ್ತು. ಆದರೆ ಸಹ ಕೈದಿಗಳ ದಾಳಿಗೆ ತುತ್ತಾಗಿ ಆತ ಮರಣವನ್ನಪ್ಪಿದ್ದ. 
 
ದೇಶಾದ್ಯಂತ ಸಂಚಲನ ಮೂಡಿಸಿದ್ದ ಸರಬ್ಜಿತ್ ಕುರಿತು ಈ ವರ್ಷದ ಆರಂಭದಲ್ಲಿ ಹಿಂದಿ ಸಿನಿಮಾ ಕೂಡ ತೆರೆ ಕಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಧಿಕಾರಿಗಳು ನಿಮ್ಮ ಮನೆಯ ಜೀತದಾಳುಗಳಲ್ಲ: ಸಿದ್ದರಾಮಯ್ಯಗೆ ಆರ್‌ ಅಶೋಕ್ ಪ್ರಶ್ನೆ

Pehalgam attack: ಪಹಲ್ಗಾಮ್ ದಾಳಿಯ ಮತ್ತೊಂದು ಭೀಕರ ವಿಡಿಯೋ ವೈರಲ್

ನೀವು ಸರ್ವಾಧಿಕಾರಿಯಲ್ಲ: ಸಿಎಂ ಸಿದ್ದರಾಮಯ್ಯಗೆ ನಡೆಗೆ ಸಿಟಿ ರವಿ ಆಕ್ರೋಶ

ವರದಕ್ಷಿಣೆಗಾಗಿ ಊಟ ನೀಡದೆ 21ಕೆಜಿ ಕುಸಿದು ಮಹಿಳೆ ಸಾವು ಪ್ರಕರಣ: ಪತಿ, ಅತ್ತೆಗೆ ಜೀವಾವಧಿ ಶಿಕ್ಷೆ

Metro Rules Violation: ಮೆಟ್ರೋದಲ್ಲಿ ಆಹಾರ ಸೇವಿಸಲು ಹೋಗಿ ಎಡವಟ್ಟು ಮಾಡಿಕೊಂಡ ಮಹಿಳೆ, ಬಿತ್ತು ದಂಡ

ಮುಂದಿನ ಸುದ್ದಿ
Show comments