Select Your Language

Notifications

webdunia
webdunia
webdunia
webdunia

ಆಸ್ಸಾಂನಲ್ಲಿ ಆರೆಸ್ಸೆಸ್‌ನಿಂದ ಬಾಲಕಿಯರ ಕಳ್ಳಸಾಗಾಣಿಕೆ: ಕಾಂಗ್ರೆಸ್ ಆರೋಪ

ಆಸ್ಸಾಂನಲ್ಲಿ ಆರೆಸ್ಸೆಸ್‌ನಿಂದ ಬಾಲಕಿಯರ ಕಳ್ಳಸಾಗಾಣಿಕೆ: ಕಾಂಗ್ರೆಸ್ ಆರೋಪ
ನವದೆಹಲಿ , ಶನಿವಾರ, 30 ಜುಲೈ 2016 (19:33 IST)
ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಸಂಸ್ಥೆಗಳು ಆಸ್ಸಾಂ ರಾಜ್ಯದಿಂದ ಕಾನೂನುಬಾಹಿರವಾಗಿ ಬುಡಕಟ್ಟು ಸಮುದಾಯದ ಬಾಲಕಿಯರ ಮಾನವ ಕಳ್ಳಸಾಗಾಣಿಕೆ ಮಾಡುತ್ತಿವೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಭಾಗವಾಗಿದೆಯೇ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
 
ಸಂಘ ಪರಿವಾರದ ಸಹೋದರಿ ಸಂಸ್ಥೆಗಳಾದ ರಾಷ್ಟ್ರ ಸೇವಿಕಾ ಸಮಿತಿ, ವಿದ್ಯಾ ಭಾರತಿ ಮತ್ತು ಸೇವಾ ಭಾರತಿ ಸಂಸ್ಥೆಗಳು ಉತ್ತಮ ಶಿಕ್ಷಣ ಕೊಡಿಸುವ ನೆಪವೊಡ್ಡಿ ಆಸ್ಸಾಂ ರಾಜ್ಯದಿಂದ ಬುಡಕಟ್ಟು ಸಮುದಾಯದ ಬಾಲಕಿಯರನ್ನು ಕಳ್ಳಸಾಗಾಣೆ ಮಾಡುತ್ತಿರುವುದು ಹೇಯ, ಕೆಟ್ಟ, ನೋವು ತರುವಂತಹ ಕೃತ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ತಿಳಿಸಿದ್ದಾರೆ.
 
ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಶೋಭಾ ಓಝಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಚತುರ್ವೇದಿ, ಕುಲಂಕೂಷ ತನಿಖೆ ನಡೆಸಿ, ಸಾಕ್ಷ್ಯ ಕಿರು ಧಾರವಾಹಿ ಬಹಿರಂಗವಾಗಿದ್ದು, ಯಾವ ರೀತಿ ಸಂಘ ಪರಿವಾರ ದೇಶಿಯ ಮತ್ತು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿ, ಮಕ್ಕಳ ಹಕ್ಕುಗಳನ್ನು ಕಸಿದುಕೊಂಡು 31 ಬುಡಕಟ್ಟು ಸಮುದಾಯದ ಬಾಲಕಿಯರಿಗೆ ಆಸ್ಸಾಂನಿಂದ ಪಂಜಾಬ್‌ಗೆ ಮತ್ತು ಗುಜರಾತ್‌ನಿಂದ ಬೇರೆ ಕಡೆ ಸ್ಥಳಾಂತರಿಸಲಾಗುತ್ತದೆ ಎನ್ನುವ ಸಂಪೂರ್ಣ ವಿವರಗಳು ಬಹಿರಂಗವಾಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೇಟಿ ಬಚಾವೋ, ಬೇಟಿ ಪಡಾವೋ ಭರವಸೆ ಈಡೇರಿದೆಯೇ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ಮಕ್ಕಳಿಗೆ ರಕ್ಷಣೆ ಕೊಡುವುದು ಮತ್ತು ಶಿಕ್ಷಿತರನ್ನಾಗಿ ಮಾಡುವ ಉದ್ದೇಶ ಏನಾಯ್ತು? ಆಸ್ಸಾಂನಿಂದ ಪಂಜಾಬ್‌ಗೆ ಕರೆದುಕೊಂಡು ಹೋಗಿರುವ 31 ಮಕ್ಕಳು ಸುರಕ್ಷಿತವಾಗಿ ಮನೆಗಳಿಗೆ ವಾಪಸಾಗಿದ್ದಾರೆಯೇ ಎಂದು ಗುಡುಗಿದ್ದಾರೆ.   
 
ಕೇಂದ್ರ ಸರಕಾರ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದ ಗುಜರಾತ್ ಮತ್ತು ಪಂಜಾಬ್ ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆಯೇ ಎಂದು ಪ್ರಿಯಾಂಕಾ ಚತುರ್ವೇದಿ ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಫ್ಘನ್ ಭದ್ರತಾ ಪಡೆಗಳಿಂದ 36 ಐಸಿಸ್ ಉಗ್ರರ ಹತ್ಯೆ