Webdunia - Bharat's app for daily news and videos

Install App

ಸ್ವಚ್ಛ ಭಾರತಕ್ಕಾಗಿ ಗಾಯಕರಾದ ಸಚಿನ್

Webdunia
ಮಂಗಳವಾರ, 29 ಸೆಪ್ಟಂಬರ್ 2015 (12:22 IST)
ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಕರೆಯನ್ನು ಸ್ವೀಕರಿಸಿ ಹಿಂದೊಮ್ಮೆ ಪೊರಕೆ ಹಿಡಿದಿದ್ದ ಕ್ರಿಕೆಟ್ ಮಾಂತ್ರಿಕ ಸಚಿನ್ ಈಗ ಅದೇ ಅಭಿಯಾನದ ಪ್ರಚಾರಕ್ಕಾಗಿ ಗಾಯಕರಾಗಿದ್ದಾರೆ.

ಪ್ರಧಾನಿಯವರ ಮಹಾತ್ವಾಕಾಂಕ್ಷಿ ಸ್ವಚ್ಛ ಭಾರತ್ ಅಭಿಯಾನದ ಜಾಗೃತಿ ಮೂಡಿಸಲು ಸರ್ಕಾರದಿಂದ ರಚನೆಯಾಗುತ್ತಿರುವ  ಗೀತೆಗೆ ಸಚಿನ್‌ ತೆಂಡೂಲ್ಕರ್‌ ಧ್ವನಿ ನೀಡಿದ್ದಾರೆ.
 
ಖ್ಯಾತ ಸಂಗೀತ ಸಂಯೋಜಕರಾದ ಶಂಕರ್-ಎಹಸಾನ್-ಲಾಯ್ ಹಾಡಿಗೆ ಸ್ವರ ಸಂಯೋಜನೆ ಮಾಡಿದ್ದು, ಶಂಕರ್ ಮಹಾದೇವನ್ ಸೇರಿದಂತೆ ಹಲವು ಕಲಾವಿದರು ಈ ಹಾಡಿಗೆ ಸ್ವರ ನೀಡಿದ್ದಾರೆ. ಅಲ್ಲದೇ ಸಚಿನ್ ಅವರ ಜತೆ ಧ್ವನಿಗೂಡಿಸಿದ್ದಾರೆ. ಜತೆಗೆ ಹಾಡಿನ ಸಂಗಿತ ಸಂಯೋಜನೆಯಲ್ಲಿ ಸಚಿನ ಕೆಲ ಸಲಹೆಗಳನ್ನು ಸಹ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಗೀತೆ ರಚನೆಕಾರ ಪ್ರಸೂನ್‌ ಜೋಶಿ ಈ ಹಾಡನ್ನು ಬರೆದಿದ್ದು, ಸಂಗೀತ ನಿರ್ದೇಶಕರಾದ ಶಂಕರ್–ಎಹಸಾನ್‌–ಲಾಯ್‌ ಅವರು ಈ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 
 
ಗಾಂಧಿ ಜಯಂತಿಯಂದು ಈ ಹಾಡು ಬಿಡುಗಡೆಯಾಗಲಿದೆ.
 
'ನನ್ನ ಮನವಿಗೆ ಬೆಲೆ ಕೊಟ್ಟು ಸ್ವಚ್ಚ ಭಾರತ್ ಅಭಿಯಾನಕ್ಕೆ ಬೆಂಬಲ ನೀಡಿದಂತೆ, ಈಗಲೂ ನಿಮ್ಮ ಸಹಕಾರ ಸಿಗುತ್ತದೆ ಎಂಬ ವಿಶ್ವಾಸವಿದೆ', ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments