ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಕರೆಯನ್ನು ಸ್ವೀಕರಿಸಿ ಹಿಂದೊಮ್ಮೆ ಪೊರಕೆ ಹಿಡಿದಿದ್ದ ಕ್ರಿಕೆಟ್ ಮಾಂತ್ರಿಕ ಸಚಿನ್ ಈಗ ಅದೇ ಅಭಿಯಾನದ ಪ್ರಚಾರಕ್ಕಾಗಿ ಗಾಯಕರಾಗಿದ್ದಾರೆ.
ಪ್ರಧಾನಿಯವರ ಮಹಾತ್ವಾಕಾಂಕ್ಷಿ ಸ್ವಚ್ಛ ಭಾರತ್ ಅಭಿಯಾನದ ಜಾಗೃತಿ ಮೂಡಿಸಲು ಸರ್ಕಾರದಿಂದ ರಚನೆಯಾಗುತ್ತಿರುವ ಗೀತೆಗೆ ಸಚಿನ್ ತೆಂಡೂಲ್ಕರ್ ಧ್ವನಿ ನೀಡಿದ್ದಾರೆ.
ಖ್ಯಾತ ಸಂಗೀತ ಸಂಯೋಜಕರಾದ ಶಂಕರ್-ಎಹಸಾನ್-ಲಾಯ್ ಹಾಡಿಗೆ ಸ್ವರ ಸಂಯೋಜನೆ ಮಾಡಿದ್ದು, ಶಂಕರ್ ಮಹಾದೇವನ್ ಸೇರಿದಂತೆ ಹಲವು ಕಲಾವಿದರು ಈ ಹಾಡಿಗೆ ಸ್ವರ ನೀಡಿದ್ದಾರೆ. ಅಲ್ಲದೇ ಸಚಿನ್ ಅವರ ಜತೆ ಧ್ವನಿಗೂಡಿಸಿದ್ದಾರೆ. ಜತೆಗೆ ಹಾಡಿನ ಸಂಗಿತ ಸಂಯೋಜನೆಯಲ್ಲಿ ಸಚಿನ ಕೆಲ ಸಲಹೆಗಳನ್ನು ಸಹ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಗೀತೆ ರಚನೆಕಾರ ಪ್ರಸೂನ್ ಜೋಶಿ ಈ ಹಾಡನ್ನು ಬರೆದಿದ್ದು, ಸಂಗೀತ ನಿರ್ದೇಶಕರಾದ ಶಂಕರ್–ಎಹಸಾನ್–ಲಾಯ್ ಅವರು ಈ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಗಾಂಧಿ ಜಯಂತಿಯಂದು ಈ ಹಾಡು ಬಿಡುಗಡೆಯಾಗಲಿದೆ.
'ನನ್ನ ಮನವಿಗೆ ಬೆಲೆ ಕೊಟ್ಟು ಸ್ವಚ್ಚ ಭಾರತ್ ಅಭಿಯಾನಕ್ಕೆ ಬೆಂಬಲ ನೀಡಿದಂತೆ, ಈಗಲೂ ನಿಮ್ಮ ಸಹಕಾರ ಸಿಗುತ್ತದೆ ಎಂಬ ವಿಶ್ವಾಸವಿದೆ', ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.