ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಓ)ಗಳನ್ನು ವಿಸರ್ಜಿಸಿ, ಇನ್ನು ಕೆಲವೇ ತಿಂಗಳಲ್ಲಿ ದಕ್ಷ ಪರ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದೆಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕಾರ್ಯನಿರತ ಪತ್ರಕರ್ತರ ಯೂನಿಯನ್ ಪುಣೆ (PUWJ) , ಜೆಎಸ್ ಕರಂಡಿಕರ್ ಸ್ಮರಣಾರ್ಥ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು ''ದೇಶದಲ್ಲಿ ಕೆಲವು ಹಳತಾದ ಕಾನೂನುಗಳು ಮತ್ತು ವ್ಯವಸ್ಥೆಗಳು ಜಾರಿಯಲ್ಲಿದ್ದು, ಅವುಗಳನ್ನು ವಿಸರ್ಜಿಸಬೇಕಾದ ಅಗ್ಯವಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಓ)ನಂತ ಕೆಲವು ವ್ಯವಸ್ಥೆಗಳನ್ನು ಶೀರ್ಘದಲ್ಲೇ ರದ್ದುಗೊಳಿಸಲಾಗುವುದು. ಆರ್ಟಿಓ ಅಗತ್ಯ ಕಾಣುತ್ತಿಲ್ಲ. ಹಾಗಾಗಿ ಈ ವ್ಯವಸ್ಥೆಗೆ ಪರ್ಯಾಯವಾಗಿರುವ ಕಾನೂನನ್ನು ಜಾರಿದೆ ತರಲಾಗುವುದು'' .
ಆರ್ಟಿಓ ಅಧಿಕಾರಿಗಳಿಂದ ನಾಗರಿಕರ ಮೇಲಾಗುತ್ತಿರುವ ಶೋಷಣೆ ಕುರಿತು ಪ್ರಸ್ತಾಪಿಸಿದ ಅವರು '' ಅಲ್ಲಿ ನಡೆಯುವುದು ಕುರುಡು ಕಾಂಚಾಣದ ನರ್ತನವೊಂದೇ (ತಿಥೆ ಲಕ್ಷ್ಮಿದರ್ಶನಾಚ ಖೇಲ್ ಚಲ್ತೋ). ಇದರಿಂದ ನಾಗರಿಕರು ಭಾರಿ ಕಿರುಕುಳ ಅನುಭವಿಸುತ್ತಿದ್ದಾರೆ. *
ಸಾರಿಗೆ ಶೋಷಕರನ್ನು ದಸ್ತಗಿರಿ ಮಾಡಲು ನೆರವಾಗುವ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಚಾಲನಾ ಪರವಾನಗಿ ನೀಡುವ ವ್ಯವಸ್ಥೆಯೂ ಪಾರದರ್ಶಕವಾಗಲಿದೆ. ನಿಜ ಹೇಳಬೇಕೆಂದರೆ ಆರ್ಟಿಓದ ಅಗತ್ಯವೇ ಇರದು'' .
''ಕಾಯಿದೆ ಸಂಪೂರ್ಣವಾಗಿ ಹಳತಾಗಿದ್ದು, ಈಗಿನ ಪರಿಸ್ಥಿತಿಗೆ ಹೊಂದುವಂತೆ ಇಲ್ಲ. ಹಾಗಾಗಿ ಕಾನೂನಿಗೆ ತಿದ್ದುಪಡಿ ತರಬೇಕಿದೆ. ಅಮೆರಿಕ, ಕೆನಡಾ, ಸಿಂಗಾಪುರ, ಜಪಾನ್ , ಜರ್ಮನಿ ಹಾಗೂ ಬ್ರಿಟನ್ ಮುಂತಾದ ಅಭಿವೃದ್ಧಿ ರಾಷ್ಟ್ರಗಳಲ್ಲಿ ಜಾರಿಯಿರುವ ಸಂಚಾರ ವ್ಯವಸ್ಥೆಯ ಮಾದರಿಯ ಸಹಾಯ ಪಡೆದುಕೊಂಡು ವಿಧೇಯಕದ ಕರಡು ಸಿದ್ಧಪಡಿಸಲಾಗಿದೆ,''ಎಂದು ಅವರು ಹೇಳಿದ್ದಾರೆ.