Select Your Language

Notifications

webdunia
webdunia
webdunia
webdunia

ಕೇರಳ: ವೃದ್ಧ ತಂದೆ-ತಾಯಿಗಳ ಎದುರೇ ಆರ್‌ಎಸ್ಎಸ್ ಕಾರ್ಯಕರ್ತನ ಭೀಕರ ಹತ್ಯೆ

ಕೇರಳ: ವೃದ್ಧ ತಂದೆ-ತಾಯಿಗಳ ಎದುರೇ ಆರ್‌ಎಸ್ಎಸ್ ಕಾರ್ಯಕರ್ತನ ಭೀಕರ ಹತ್ಯೆ
ಕಣ್ಣೂರ್ , ಮಂಗಳವಾರ, 16 ಫೆಬ್ರವರಿ 2016 (13:51 IST)
27 ವರ್ಷದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತನನ್ನು ಆತನ ವೃದ್ಧ ತಂದೆ-ತಾಯಿಗಳ ಎದುರೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. 

ಸೋಮವಾರ ರಾತ್ರಿ ಈ ದುರ್ಘಟನೆ ನಡೆದಿದ್ದು, ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುಜಿತ್ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. 
 
ರಾತ್ರಿ 11.30 ರ ಸುಮಾರಿಗೆ ಸುಜಿತ್ ನಿವಾಸಕ್ಕೆ ಬಂದ ದುಷ್ಕರ್ಮಿಗಳು ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಪೆ. ವೃದ್ಧ ಪೋಷಕರು ಮತ್ತು ಸಹೋದರ ಸುಜಿತ್ ರಕ್ಷಣೆಗೆ ಬಂದಾಗ ಅವರ ಮೇಲೂ ಸಹ ಕ್ರೂರಿಗಳು ದಾಳಿ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಕಮ್ಯುನಿಷ್ಟ ಪಕ್ಷದ ಕೆಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. 
 
ಸುಜಿತ್ ಸಾವಿನ ಹಿಂದೆ ಕಮುನಿಷ್ಟ್ ಪಕ್ಷದ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. 
 
ಘಟನೆಯಿದಾಗಿ ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಾಂತಿ ಕಾಪಾಡಲು ಪೊಲೀಸರನ್ನು ನಿಯೋಜಿಸಲಾಗಿದೆ.

Share this Story:

Follow Webdunia kannada