Webdunia - Bharat's app for daily news and videos

Install App

ಆರ್‌ಎಸ್ಸೆಸ್ ಬ್ರಹ್ಮಚಾರಿಗಳ ಒಕ್ಕೂಟ: ಅಕ್ಬರುದ್ದೀನ್

Webdunia
ಮಂಗಳವಾರ, 3 ಮಾರ್ಚ್ 2015 (10:09 IST)
ಎಂಐಎಂ ಮುಖಂಡ ಅಕ್ಬರುದ್ದೀನ್ ಒವೈಸಿಗೆ ವಿವಾದ ಹೊಸದೇನಲ್ಲ. ಅವರು ಸೋಮವಾರ ಆರ್‌ಎಸ್ಸೆಸ್ ಬ್ರಹ್ಮಚಾರಿಗಳ  ಒಕ್ಕೂಟ ಎಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಅವರ ಪಕ್ಷ ಮಜ್ಲಿಸ್ ಇತ್ತೆಹುದುಲ್ ಮುಸ್ಲಿಮೀನ್ ಅಥವಾ ಎಂಐಎಂ ಹೈದರಾಬಾದ್ ಪಕ್ಷದ ಮುಖ್ಯಕಚೇರಿಯಲ್ಲಿ 57ನೇ ಸಂಸ್ಥಾಪನೆ ದಿನವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್ಚು ಮಕ್ಕಳನ್ನು ಹೆರಬೇಕೆಂದು ಸಲಹೆ ನೀಡುವವರು ಸ್ವತಃ ಬ್ರಹ್ಮಚಾರಿಗಳಾಗಿದ್ದು, ಈ ಪ್ರತಿಕ್ರಿಯೆ ನೀಡಲು ಅರ್ಹತೆ ಹೊಂದಿಲ್ಲ ಎಂದು ನುಡಿದರು.ಅವರು ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಮತ್ತು ಜೀವನದ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಆದರೆ ಇತರರಿಗೆ ಸಲಹೆ ನೀಡುತ್ತಾರೆ ಎಂದು ಹೇಳಿದರು. ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ಇತ್ತೀಚೆಗೆ ಪ್ರತಿಯೊಬ್ಬ ಹಿಂದೂ ಮಹಿಳೆ ನಾಲ್ಕು ಮಕ್ಕಳನ್ನು ಹೆರಬೇಕೆಂದು ಹೇಳಿದ್ದರು.

ಎಲ್ಲಾ ಮುಸ್ಲಿಮರು ಒಗ್ಗಟ್ಟಾಗಿರಬೇಕು ಮತ್ತು ತಮ್ಮ ಪಕ್ಷವು ಕೋಮುವಾದಿ ರಾಜಕೀಯದ ವಿರುದ್ಧ ಹೋರಾಟ ಮಾಡುತ್ತದೆ ಎಂದು ಹೇಳಿದರು. ಅವರು ಒಗ್ಗಟ್ಟಾಗಿರದಿದ್ದರೆ ಮುಸ್ಲಿಮರ ಗುರುತಿಸುವಿಕೆ ಅಪಾಯದಲ್ಲಿರುವ ಸಂಭವವಿದೆ ಎಂದರು.ಎಂಐಎಂ ದಲಿತರ ಉದ್ದಾರಕ್ಕೆ ಕೆಲಸಮಾಡುತ್ತಿದ್ದು, ಅವರ ಹಕ್ಕುಗಳಿಗಾಗಿ ಹೋರಾಡುತ್ತಿದೆ ಎಂದರು. ಕೆಲವು ಸ್ಥಳೀಯ ಚುನಾವಣೆಗಳಲ್ಲಿ ದಲಿತ ಅಭ್ಯರ್ಥಿಗಳನ್ನು ಎಂಐಎಂ ನಿಲ್ಲಿಸಿದೆ ಎಂದು ಹೇಳಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments