Webdunia - Bharat's app for daily news and videos

Install App

ವೈಯಕ್ತಿಕ ಹತಾಶೆಯಿಂದ ರೋಹಿತ್ ವೇಮುಲ ಆತ್ಮಹತ್ಯೆ

Webdunia
ಗುರುವಾರ, 6 ಅಕ್ಟೋಬರ್ 2016 (15:39 IST)
ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು ವೈಯಕ್ತಿಕ ಕಾರಣಗಳಿಗಾಗಿ ಹೊರತು ತಾರತಮ್ಯಕ್ಕೆ ಬೇಸತ್ತು ಅಲ್ಲ ಎಂದು ತನಿಖಾ ವರದಿ ಬಹಿರಂಗ ಪಡಿಸಿದೆ.
ವರದಿಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ವೇಮುಲ ನಿರ್ಧಾರ ಸಂಪೂರ್ಣವಾಗಿ ಆತನದೇ ಆಗಿತ್ತು. ಹೊರತು ಇದರಲ್ಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಅಥವಾ ಸರ್ಕಾರದ ಪಾತ್ರವಿಲ್ಲ. ಆತನ ಆತ್ಮಹತ್ಯೆ ಲಾಭವನ್ನು ಪಡೆದುಕೊಳ್ಳಲು ಆತನನ್ನು ದಲಿತನೆಂದು ಬಿಂಬಿಸಲಾಯಿತು. ವಾಸ್ತವವಾಗಿ ಆತ ದಲಿತನೇ ಅಲ್ಲ ಎಂದು ವರದಿ ತಿಳಿಸಿದೆ.
 
ಸಂಶೋಧನಾ ವಿದ್ಯಾರ್ಥಿ ವೇಮುಲ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಕಳೆದ ಜನೇವರಿ 28, 2016ರಂದು ನಿವೃತ್ತ ನ್ಯಾಯಮೂರ್ತಿ ಎ.ಕೆ. ರೂಪನ್ವಾಲಾ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತ್ತು. 
 
ತನಿಖೆಯನ್ನು ನಡೆಸಿ ಕಳೆದ ಆಗಸ್ಟ್ ತಿಂಗಳಲ್ಲಿ 41 ಪುಟಗಳ ವರದಿಯನ್ನು ನೀಡಿರುವ ಆಯೋಗ, ರೋಹಿತ್ ವೈಯಕ್ತಿಕ ಕಾರಣಕ್ಕಾಗಿ ಸಾವಿಗೆ ಶರಣಾದರು. ಆದರೆ ಮೀಸಲಾತಿ ಪ್ರಯೋಜನವನ್ನು ಪಡೆಯುವು ದುರುದ್ದೇಶದಿಂದ ರೋಹಿತ್ ತಾಯಿ ರಾಧಾ ತಾನು ದಲಿತಳು ಎಂದು ಬಿಂಬಿಸಿಕೊಂಡಳು. ಆದರೆ ಅಸಲಿಗೆ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ನಂಬಲಾಗದ ವಿಷಯ ಎಂದು ವರದಿ ಹೇಳಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಪಿ ಯೋಗೇಶ್ವರ್ ಫ್ಯಾಮಿಲಿ ಮ್ಯಾಟರ್: ರಣದೀಪ್ ಸುರ್ಜೇವಾಲಗೆ ದೂರು ಕೊಟ್ಟ ಪತ್ನಿ

ರಾಜಸ್ಥಾನದ ಚುರುವಿನಲ್ಲಿ ವಾಯುಪಡೆಯ ಜಾಗ್ವಾರ್ ಫೈಟರ್ ಪತನ: ಪೈಲಟ್ ಸಾವು

ಗುಜರಾತ್‌: ಸೇತುವೆ ಮುರಿದು ನದಿಗೆ ಬಿದ್ದ ವಾಹನಗಳು, 9ಮಂದಿ ಸಾವು

ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ ತಹವ್ವುರ್ ರಾಣಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ನಮ್ಮ ಪಕ್ಷದ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಬಿಕೆ ಹರಿಪ್ರಸಾದ್ ಗೆ ಟಾಂಗ್ ಕೊಟ್ಟ ವಿಜಯೇಂದ್ರ

ಮುಂದಿನ ಸುದ್ದಿ
Show comments