Select Your Language

Notifications

webdunia
webdunia
webdunia
webdunia

1ಕೆಜಿ ಬೆಳ್ಳಿಯ ಆಭರಣಕ್ಕಾಗಿ ಪಾದವನ್ನೇ ಕತ್ತರಿಸಿದ ದರೋಡೆಕೋರರು

1ಕೆಜಿ ಬೆಳ್ಳಿಯ ಆಭರಣಕ್ಕಾಗಿ ಪಾದವನ್ನೇ ಕತ್ತರಿಸಿದ ದರೋಡೆಕೋರರು
ಉದಯ್‌ಪುರ್ , ಮಂಗಳವಾರ, 5 ಮೇ 2015 (17:18 IST)
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ದರೋಡೆಕೋರರು ಹಿರಿಯ ವಯಸ್ಸಿನ ಮಹಿಳೆಯನ್ನು ಹತ್ಯೆ ಮಾಡಿ 1 ಕೆಜಿ ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಸಾಕೋದರಾ ಗ್ರಾಮದಲ್ಲಿ ನಡೆದಿದೆ.

ದರೋಡೆಕೋರರು ಹೇಯ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಗ್ರಾಮದ ನಿವಾಸಿಯಾದ ಉದಿಬಾಯಿ ಎನ್ನುವ ಮಹಿಳೆ ಮಧ್ಯಾಹ್ನದವರೆಗೂ ಮನೆಯಿಂದ ಹೊರಗೆ ಬಾರದಿದ್ದಾಗ ಅನುಮಾನಗೊಂಡ ನೆರೆಹೊರೆಯವರು ಆಕೆಯ ಕುಶಲೋಪರಿ ವಿಚಾರಿಸಲು ಆಕೆಯ ಮನೆಯನ್ನು ಪ್ರವೇಶಿಸಿದಾಗ ಅಲ್ಲಿದ್ದ ದೃಶ್ಯ ಕಂಡು ದಂಗುಬಡಿದಂತಾಗಿದ್ದಾರೆ.

ಮಹಿಳೆ ಉದಿಬಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆಕೆಯ ತುಂಡರಿಸಿದ ಮೃತ ದೇಹ ಕಂಡು ಆಘಾತಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಾಲಲ್ಲಿದ್ದ ಬೆಳ್ಳಿಯ ಆಭರಣವನ್ನು ತೆಗೆದುಕೊಂಡ ಹೋಗಲು ದರೋಡೆಕೋರರು ಆಕೆಯ ಪಾದವನ್ನೇ ಕತ್ತರಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಲಾಂಬಾ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada