Webdunia - Bharat's app for daily news and videos

Install App

ಜಯಲಲಿತಾ ಬಗ್ಗೆ ಕೆಲವರಿಗೆ ಮಾತ್ರ ಗೊತ್ತಿರುವ 7 ಸಂಗತಿಗಳು

Webdunia
ಬುಧವಾರ, 7 ಡಿಸೆಂಬರ್ 2016 (11:39 IST)
ತಮಿಳುನಾಡಿನ ಜನರ ಪಾಲಿನ ಅಮ್ಮ, ಮೆಚ್ಚಿನ ಮುಖ್ಯಮಂತ್ರಿ ಜೆ. ಜಯಲಲಿತಾ ನಿನ್ನೆ ಸಂಜೆ ಮಣ್ಣು ಸೇರಿದರೂ ಅವರ ಅಭಿಮಾನಿಗಳ ಶೋಕಾಚರಣೆ ಇನ್ನು ನಿಂತಿಲ್ಲ. ತಮ್ಮ ಪ್ರೀತಿಯ ಪುರಚ್ಚಿ ತಲೈವಿಯನ್ನು ನೆನಪಿಸಿಕೊಂಡು ಅವರ ಬೆಂಬಲಿಗರು ಗೋಳಾಡುತ್ತಿದ್ದಾರೆ. 
ಜನರ ಪಾಲಿನ ಕಣ್ಮಣಿಯಾಗಿದ್ದ ಕ್ರಾಂತಿಕಾರಿ ನಾಯಕಿ ಜಯಾ ಅವರ ಬಗ್ಗೆ ಕೆಲವೇ ಜನರಿಗೆ ಗೊತ್ತಿರುವ ಸಂಗತಿಗಳಿವು.
 
1. ಅತ್ಯಂತ ಕಡಿಮೆ ಸಂಬಳದ ಸಿಎಂ: ಅತಿ ಚಿಕ್ಕ ಪ್ರಾಯದಲ್ಲಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಹೆಗ್ಗಳಿಕೆ ಹೊಂದಿದ್ದ ಕುಮಾರಿ ಜಯಲಲಿತಾ ಅವರು ತಮ್ಮ ಹುದ್ದೆಗೆ ನೀಡಲಾದ ಪ್ರಥಮ ಸಂಬಳದ ಚೆಕ್‌ನ್ನು ಪಡೆಯಲು ನಿರಾಕರಿಸಿದ್ದರು. ಆದರೆ ಜನಪ್ರತಿನಿಧಿಯಾಗಿ ಸಂಬಳವನ್ನು ಪಡೆಯಲೇ ಬೇಕೆಂದಾಗ ತಿಂಗಳಿಗೆ ಕೇವಲ 1 ರೂಪಾಯಿ ಪಡೆಯಲು ಒಪ್ಪಿಕೊಂಡರು. 
 
2. ಹಿಂದಿ ಸಿನಿಮಾದಲ್ಲೂ ಅಭಿನಯ: ತಮ್ಮ 15ನೇ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ದಕ್ಷಿಣ ಭಾರತದ ಸುಪ್ರಸಿದ್ಧ ನಟಿಯಾಗಿ ಬೆಳೆದ ಜಯಾ ಹಿಂದಿ ಸಿನಿಮಾದಲ್ಲೂ ಕೂಡ ಅಭಿನಯಿಸಿದ್ದರು. 80 ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಅವರು ಧರ್ಮೇಂದ್ರ ಅವರಿಗೆ ನಾಯಕಿಯಾಗಿ ಹಿಂದಿಯ 'ಇಜ್ಜತ್' ಸಿನಿಮಾದಲ್ಲಿ ನಟಿಸಿದ್ದರು. 
 
3. ಸಾರ್ವಜನಿಕ ಸ್ನಾನ: ದಕ್ಷಿಣ ಭಾರತದ ಕುಂಭಮೇಳವಾದ ಮಹಾಮಕಮ್‌ನಲ್ಲಿ ಒಮ್ಮೆ ಭಾಗವಹಿಸಿದ್ದ ಅಮ್ಮ ಸಾರ್ವಜನಿಕ ಸ್ಥಳದಲ್ಲಿ ಸ್ನಾನ ಮಾಡಿದ್ದರು. 
 
4.  ಗಿನ್ನಿಸ್ ದಾಖಲೆ ಸೇರಿದ ಮಗನ ವಿವಾಹ:  ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ(1995) ಅವರು ಕೈಗೊಂಡ ತಮ್ಮ ಸಾಕುಮಗ ಸುಧಾಕರನ್ ಅವರ ಅದ್ದೂರಿ ವಿವಾಹ ಗಿನ್ನಿಸ್ ಬುಕ್‌ನಲ್ಲಿ ದಾಖಲಾಯಿತು. ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿರುವ ಪ್ರಕಾರ ಸುಮಾರು ಚೆನ್ನೈನ 50 ಎಕರೆ ವಿಶಾಲ ಮೈದಾನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ  1,50,000ಕ್ಕಿಂತ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. 
 
5. ಜಯಾ ಪ್ರಥಮ ಚಿತ್ರ 'ವಯಸ್ಕರಿಗಾಗಿ ಮಾತ್ರ': 1965ರಲ್ಲಿ ಬಿಡುಗಡೆಯಾದ ಜಯಲಲಿತಾ ಅವರ ಮೊದಲ ತಮಿಳು ಸಿನೆಮಾ 'ವೆನ್ನಿರಾ ಆಡೈ' (ಬಿಳಿ ಬಟ್ಟೆ) ಕೇವಲ ವಯಸ್ಕರಿಗಾಗಿ ಮಾತ್ರ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ಸಿನೆಮಾದಲ್ಲಿ ನಟಿಸಿದಾಗ ಜಯಾಗೆ ಕೇವಲ 15 ವರ್ಷ. ಕೆಲವು ವರದಿಗಳ ಪ್ರಕಾರ ತಮ್ಮ ಪ್ರಥಮ ಸಿನಿಮಾವನ್ನು ಸ್ವತಃ ಜಯಲಲಿತಾ ಅವರೇ ನೋಡಿರಲಿಲ್ಲ. 

6. 10ನೇ ತರಗತಿಯಲ್ಲಿ ಪ್ರಥಮ ಶ್ರೇಯಾಂಕ: ಓದಿನಲ್ಲಿ ಸದಾ ಮುಂದಿದ್ದ ಜಯಲಲಿತಾ ಅವರು 10ನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಅಪಾರ ಹಂಬಲವಿದ್ದರೂ ಬಡತನದಿಂದಾಗಿ ಓದನ್ನು ಮೊಟಕುಗೊಳಿಸಿದರು.

7.ಆರು ಭಾಷಾ ಪ್ರವೀಣೆ: ನೋಡಲಷ್ಟೇ ಸುಂದರವಲ್ಲ, ಪಾಂಡಿತ್ಯದಲ್ಲೂ ಮೇರುಸ್ಥಾನದಲ್ಲಿದ್ದ ಅವರು ದಕ್ಷಿಣ ಭಾರತೀಯ ಭಾಷೆಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಂ ಅಷ್ಟೇ ಅಲ್ಲದೇ ಇಂಗ್ಲೀಷ್ ಮತ್ತು ಹಿಂದಿಯನ್ನು ಸಹ ಸುಲಲಿತವಾಗಿ ಮಾತನಾಡಬಲ್ಲವರಾಗಿದ್ದರು. ಇಂಗ್ಲೀಷ್ ಭಾಷೆಯಲ್ಲಿ ಪ್ರವೀಣರಾಗಿದ್ದರಿಂದಲೇ ಅವರನ್ನು ಮೊದಲ ಬಾರಿಗೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಪರೇಷನ್ ಸಿಂಧು: 3,170 ಭಾರತೀಯರು ಇಸ್ರೇಲ್‌– ಇರಾನ್‌ನಿಂದ ತಾಯ್ನಾಡಿಗೆ

ಮೋಸ್ಟ್ ವಾಂಟೆಡ್‌ ಗ್ಯಾಂಗ್‌ಸ್ಟರ್‌ ರೂಮಿ ವೊಗ್ರಾ ಎನ್‌ಕೌಂಟರ್‌ನಲ್ಲಿ ಸಾವು

ಸಿದ್ದರಾಮಯ್ಯನವರೇ ಯಾವುದೇ ಕಾರಣಕ್ಕೂ ಡಿಕೆಶಿ ಕೈಗೆ ಕರ್ನಾಟಕವನ್ನು ನೀಡಬೇಡಿ: ಬಸನಗೌಡ ಪಾಟೀಲ್

ಕುಮಾರಸ್ವಾಮಿ ಪತ್ರಕ್ಕೆ ಸಿಕ್ತು ಕೇಂದ್ರದಿಂದ ಸ್ಪಂದನೆ: ಮಾವು ಬೆಳೆಗಾರರಿಗೆ ಗುಡ್‌ನ್ಯೂಸ್‌

ವಾಟ್ಸಾಪ್‌ ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕಿರಿ: ಯುವತಿ ಸಾವಿಗೆ ಶರಣು

ಮುಂದಿನ ಸುದ್ದಿ