Webdunia - Bharat's app for daily news and videos

Install App

ಮೋದಿ ಆರೋಗ್ಯದ ಗುಟ್ಟೇನು ಗೊತ್ತಾ? ನಿಮಗೆ ತಿಳಿಯದ ಸತ್ಯ

Webdunia
ಶನಿವಾರ, 17 ಸೆಪ್ಟಂಬರ್ 2016 (15:02 IST)
ನರೇಂದ್ರ ಮೋದಿ ಪ್ರಧಾನಿಯಾಗಿದ್ದಾಗಿನಿಂದ ಎಲ್ಲರೂ ಅವರ ಕಠಿಣ ದಿನಚರಿಯ ಬಗ್ಗೆ ಚರ್ಚಿಸುತ್ತಿದ್ದಾರೆ. ದಿನದ 24 ಗಂಟೆಯಲ್ಲಿ 16 ರಿಂದ 18 ಗಂಟೆ ಅವರು ಕೆಲಸದಲ್ಲಿ ಸಕ್ರಿಯರಾಗಿರುತ್ತಾರೆ. ಮಧ್ಯದಲ್ಲಿ ಒಮ್ಮೆಯೂ ವಿಶ್ರಾಂತಿ ತೆಗೆದುಕೊಳ್ಳದೆ ಅವರು ಕೆಲಸದಲ್ಲಿ ವ್ಯಸ್ತರಾಗಿರುತ್ತಾರೆ. ಆದರೂ ಅವರು ಆರೋಗ್ಯವನ್ನು ಇತರರಿಗೆ ಮಾದರಿ ಎಂಬಂತೆ ಕಾಪಾಡಿಕೊಂಡಿದ್ದಾರೆ. ಅವರ ಈ ಆರೋಗ್ಯದ ಗುಟ್ಟು ಯೋಗ ಮತ್ತು ಆರೋಗ್ಯಕರ ಡಯಟ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಿಮಗೆಲ್ಲರಿಗೂ ತಿಳಿಯದ ಒಂದು ಗುಟ್ಟಿದೆ. ಒಂದು ನಿರ್ದಿಷ್ಟ ಆಹಾರ ಅವರನ್ನು ಇಷ್ಟು ಆರೋಗ್ಯಕರವಾಗಿಟ್ಟಿದೆಯಂತೆ? ಅದೇನು ಅಂತೀರಾ? ತಿಳಿಯಲು ಮುಂದೆ ಓದಿ.

ಪ್ರಧಾನಿ ಮೋದಿ ಅಣಬೆಯನ್ನು ತಿನ್ನುತ್ತಾರೆ ಎಂಬುದು ಕೆಲವೇ ಕೆಲವರಿಗೆ ತಿಳಿದ ಸಂಗತಿ. ಮೋದಿ ಪ್ರತಿದಿನ ಅದನ್ನು ತಿನ್ನುತ್ತಾರಂತೆ. ಅದೊಂದು ವಿಶೇಷ ಅಣಬೆ. ಹಿಮಾಚಲದಲ್ಲಿ ಬೆಳೆಯುವ ಈ ಅಣಬೆ ಬೆಲೆ ಎಷ್ಟು ಗೊತ್ತೇ? ಕೆ.ಜಿಗೆ ಬರೊಬ್ಬರಿ 30,000 ರೂಪಾಯಿ. 
 
ಸ್ವತಃ ಮೋದಿ ಈ ಗುಟ್ಟನ್ನು ಹೊರ ಹಾಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪಕ್ಷದ ಕಾರ್ಯ ನಿಮಿತ್ತ ಹಿಮಾಚಲದಲ್ಲಿದ್ದಾಗಿನಿಂದ ತಾವಿದನ್ನು ಸೇವಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
 
ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ವರದಿಗಾರರೊಂದಿಗಿನ ಅನಧಿಕೃತ ಮಾತುಕತೆಯಲ್ಲಿ ಮೋದಿ ಈ ಸತ್ಯವನ್ನು ಹೊರ ಹಾಕಿದ್ದರು. 
 
"ನನ್ನ ಉತ್ತಮ ಆರೋಗ್ಯದ ಗುಟ್ಟು ಹಿಮಾಚಲ ಪ್ರದೇಶದ ಅಣಬೆ. ಅವರು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ", ಎಂದು ಅವರು ಹೇಳಿದ್ದರು.
 
 ಈ ಅಣಬೆಯ ವೈಜ್ಞಾನಿಕ ಹೆಸರು Morchella esculenta. ಇದು ಸಾಮಾನ್ಯವಾಗಿ ಹಿಮಾಚಲ ಪ್ರದೇಶದಲ್ಲಿ ಕಂಡುಬರುತ್ತದೆ. ಜಾಗತಿಕಮಟ್ಟದಲ್ಲಿ ಇದಕ್ಕೆ ಬಹಳ ಬೇಡಿಕೆ ಇದೆ.
 
ಹಿಮಾಚಲದ ಹಳ್ಳಿಗರ ಆದಾಯದ ಪ್ರಮುಖ ಮೂಲವಿದು.  ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೆ ಇದನ್ನು ಸಂಗ್ರಹಿಸಿಸುವ ಜನರು ಒಣಗಿಸಿ ಮಾರುತ್ತಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan:ರಾತ್ರಿಯಾಗುತ್ತಿದ್ದಂತೇ ಪಾಕಿಸ್ತಾನದಿಂದ ಮತ್ತೆ ದಾಳಿ ಶುರು, 3 ರಾಜ್ಯ ಟಾರ್ಗೆಟ್

Operation Sindoor Effect:ಈ ವಿಷಯ ಗೊತ್ತಿಲ್ಲದೆ ಮಾಮೂಲಿ ಟೈಮ್‌ಗೆ ವಿಮಾನ ಹತ್ತಲು ಹೋದ್ರೆ ಮಿಸ್ ಆಗುವುದು ಗ್ಯಾರಂಟಿ

ಪಾಕ್‌, ಭಾರತ ನಡುವೆ ಹೆಚ್ಚಿದ ಉದ್ವಿಗ್ನತೆ: ಚೀನಾಗೂ ತಟ್ಟಿದ ಬಿಸಿ, ನಾಗರಿಕರಿಗೆ ಸಂದೇಶ ರವಾನೆ

ಸರ್ಕಾರದ ಈ ಕ್ರಮವು ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದೆ: ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ RSS

'Sindoor Is For Love, Not War: ಚರ್ಚೆ ಹುಟ್ಟುಹಾಕಿದ ಛಾಯಾಗ್ರಾಹಕನ ಪೋಸ್ಟ್‌

ಮುಂದಿನ ಸುದ್ದಿ
Show comments