Webdunia - Bharat's app for daily news and videos

Install App

ಪತ್ನಿ ಮತ್ತು ಮಗಳ ಜತೆ ಜಗಳವಾಡಿ ಗುಂಡು ಹಾರಿಸಿಕೊಂಡ ನಿವೃತ್ತ ಪೈಲಟ್‌

Webdunia
ಭಾನುವಾರ, 2 ಅಕ್ಟೋಬರ್ 2016 (11:31 IST)
ಪತ್ನಿ ಮತ್ತು ಮಗಳ ಜತೆ ಜಗಳವಾಡಿದ ನಿವೃತ್ತ ಪೈಲಟ್‌ವೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನವದೆಹಲಿಯಲ್ಲಿ ನಡೆದಿದೆ.
ಮೃತ ಆನಂದ್ ಕುಮಾರ್ ಮಯೂರ್ ವಿಹಾರ್‌ನ ಪಶ್ಚಿಮ ದೆಹಲಿಯ ನಿವಾಸಿಯಾಗಿದ್ದು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ. 
 
61 ವರ್ಷದ ಕುಮಾರ್ ಜರ್ಮನಿಯಲ್ಲಿ ವಾಸವಾಗಿರುವ ತಮ್ಮ ಹಿರಿಯ ಮಗಳನ್ನು ಭೇಟಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಮಧ್ಯಾಹ್ನ ತಮ್ಮ  ಕಿರಿಯ ಮಗಳು ಮತ್ತು ಪತ್ನಿ ಜತೆ ಜಗಳವಾಡಿದರು. ಕೋಪದ ಭರದಲ್ಲಿ ಅವರು ತಮ್ಮ ಬಳಿ ಇದ್ದ ಪಿಸ್ತೂಲ್ ತೆಗೆದು ಮೇಲ್ಛಾವಣಿಗೆ ಗುಂಡು ಹಾರಿಸಿದ್ದಾರೆ. ಇದರಿಂದ ಬೆದರಿದ ತಾಯಿ ಮಗಳು ಅಲ್ಲಿಂದ ಹೊರಗೋಡಿ ಹೋಗಿದ್ದಾರೆ.
 
ಅವರು ಮರಳಿ ಬಂದು ನೋಡಿದಾಗ ಪೈಲಟ್ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. 
 
ಜೆಟ್ ಏರ್‌ವೇಸ್ ಉದ್ಯೋಗಿಯಾಗಿದ್ದ ಕುಮಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸದಿಂದ ನಿವೃತ್ತರಾಗಿದ್ದು ಅಂದಿನಿಂದ ಖಿನ್ನರಾಗಿರುತ್ತಿದ್ದರು.ಕೆಲ ವರ್ಷಗಳ ಹಿಂದೆ ಅವರು ಕಿಡ್ನಿ ಕಸಿಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ಪೀಕರ್‌ ಯು.ಟಿ. ಖಾದರ್‌ ಬೆನ್ನಲ್ಲೇ ಸಿದ್ದರಾಮಯ್ಯಗೆ ಬೆದರಿಕೆ ಕರೆ: ಕ್ರಮಕ್ಕೆ ಪೊಲೀಸರಿಗೆ ಸಿಎಂ ಸೂಚನೆ

India Pakistan: ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ರೆ ಭಾರತದ ಏಳು ರಾಜ್ಯಗಳನ್ನು ನಾವು ವಶಪಡಿಸಿಕೊಳ್ತೀವಿ ಎಂದ ಬಾಂಗ್ಲಾದೇಶ ನಾಯಕ

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮೋದಿ, ಪಿಣರಾಯಿ, ಅದಾನಿ, ತರೂರ್‌: ಏನು ವಿಶೇಷ ಗೊತ್ತಾ

Mangaluru Suhas Shetty murder: ಹಿಂದೂಗಳಿಗೆ ರಕ್ಷಣೆ ಇಲ್ವಾ ಸಾರ್ ಎಂದು ಕೇಳಿದ್ದಕ್ಕೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದೇನು

ಬರ್ಬರ ಹತ್ಯೆಯಾದ ಸುಹಾಸ್‌ ಶೆಟ್ಟಿ ಕುಟುಂಬಕ್ಕೆ ಬಿಜೆಪಿಯಿಂದ 25 ಲಕ್ಷ ಪರಿಹಾರ ಘೋಷಿಸಿದ ವಿಜಯೇಂದ್ರ

ಮುಂದಿನ ಸುದ್ದಿ
Show comments