Select Your Language

Notifications

webdunia
webdunia
webdunia
webdunia

ಭಾರತದೊಂದಿಗೆ ಭೇಷರತ್ತು ಮಾತುಕತೆಗೆ ಸಿದ್ದ: ನವಾಜ್ ಷರೀಫ್

ಭಾರತದೊಂದಿಗೆ ಭೇಷರತ್ತು ಮಾತುಕತೆಗೆ ಸಿದ್ದ: ನವಾಜ್ ಷರೀಫ್
ವಾಲೆಟ್ಟಾ , ಶನಿವಾರ, 28 ನವೆಂಬರ್ 2015 (18:58 IST)
ಉಭಯ ದೇಶಗಳ ಮಧ್ಯೆ ಶಾಂತಿಯನ್ನು ಕಾಪಾಡಲು ಭಾರತದೊಂದಿಗೆ ಭೇಷರತ್ತಾಗಿ ಮಾತುಕತೆಗೆ ಪಾಕಿಸ್ತಾನ ಸಿದ್ದವಿದೆ ಎಂದು ಪ್ರಧಾನಮಂತ್ರಿ ನವಾಜ್ ಷರೀಫ್ ಹೇಳಿದ್ದಾರೆ.
ಭಾರತ ಮತ್ತು ಅಫಘಾನಿಸ್ತಾನ ಸೇರಿದಂತೆ ಎಲ್ಲಾ ನೆರೆಯ ರಾಷ್ಟ್ರಗಳೊಂದಿಗೆ ಸ್ನೇಹಮಯ ಸಂಬಂಧ ಹೊಂದಲು ಪಾಕಿಸ್ತಾನ ಬಯಸುತ್ತದೆ ಎಂದು ತಿಳಿಸಿದ್ದಾರೆ.
 
ಮಾಲ್ಟಿಸ್ ರಾಜಧಾನಿಯಲ್ಲಿ ನಡೆದಿರುವ ಕಾಮನ್‌ವೆಲ್ತ್ ದೇಶಗಳ ಮುಖ್ಯಸ್ಥರ ಸಭೆಯಲ್ಲಿ ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರೊಂದಿಗೆ ಚರ್ಚೆ ನಡೆಸಿದ ನಂತರ, ಪಾಕ್ ಪ್ರಧಾನಿ ಹೇಳಿಕೆ ಹೊರಬಿದ್ದಿದೆ.  
 
ವಹಿವಾಟು,ಹೂಡಿಕೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ.
 
ಯಾವುದೇ ರೀತಿಯ ಭಯೋತ್ಪಾದನೆಯನ್ನು ಪಾಕಿಸ್ತಾನ ಸರಕಾರ ಖಂಡಿಸುತ್ತದೆ. ಪ್ಯಾರಿಸ್‌ನಲ್ಲಿ ನಡೆದ ದಾಳಿ ವಿಷಾದಕರ. ಪಾಕಿಸ್ತಾನ ಕೂಡಾ ಭಯೋತ್ಪಾದನೆಯ ಬಲಿಪಶುವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.

Share this Story:

Follow Webdunia kannada