ಆಧ್ಯಾತ್ಮಿಕ ಮುಖಂಡ ರವಿಶಂಕರ್ ಗುರೂಜಿ ಅವರಿಗೆ ಭಯಾನಕ ಉಗ್ರಗಾಮಿ ಸಂಘಟನೆ ಐಸಿಸ್ ಬೆದರಿಕೆಗಳನ್ನು ಹಾಕಿದೆ. ಆರ್ಟ್ ಆಫ್ ಲೀವಿಂಗ್ನ ರವಿಶಂಕರ್ ಗುರೂಜಿ ಅವರು ಮಲೇಶಿಯಾಕ್ಕೆ ಭೇಟಿ ನೀಡಿದ್ದಾಗ ಐಸಿಸಿ ಬೆದರಿಕೆ ಪತ್ರಗಳನ್ನು ಕೊರಿಯರ್ ಮೂಲಕ ಕಳಿಸಿದೆ.
ಈ ಕುರಿತು ಆರ್ಟ್ ಆಫ್ ಲೀವಿಂಗ್ ವಕ್ತಾರ ನಕುಲ್ ಧಾವಾ ಮಾತನಾಡುತ್ತಾ, ಮಲೇಶಿಯಾದಲ್ಲಿ ಕೆಲವು ದಿನಗಳ ಹಿಂದೆ ಈ ಪತ್ರ ಸ್ವೀಕರಿಸಲಾಗಿದೆ. ಆದರೆ ಅಷ್ಟರಲ್ಲಿ ರವಿಶಂಕರ್ ಗುರೂಜಿ ಕಾಂಬೋಡಿಯಾಕ್ಕೆ ತೆರಳಿದ್ದರು. ಭಾರತದ ರಾಯಭಾರಿ ಕಚೇರಿ ಸೇರಿದಂತೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಐಸಿಸ್ನಿಂದ ಮೂರು ಬೆದರಿಕೆ ಪತ್ರಗಳು ಬಂದಿರುವುದಾಗಿ ಅವರು ತಿಳಿಸಿದರು.
ಪತ್ರದ ಒಕ್ಕಣೆ ಬೆದರಿಕೆಯಿಂದ ಕೂಡಿದ್ದು, ನೀವು ಕಾರ್ಯಕ್ರಮ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಐಸಿಸಿ ಬೆದರಿಕೆ ಹಾಕಿದೆ. ರವಿಶಂಕರ್ ಕೆಲವು ತಿಂಗಳ ಹಿಂದೆ ಇರಾಕ್ಗೆ ತೆರಳಿ ಭಯೋತ್ಪಾದನೆ ಸಂಘಟನೆಗೆ ಹಿಂಸಾಚಾರದ ಮಾರ್ಗವನ್ನು ಹಿಡಿಯದಂತೆ ಕೋರಿದ್ದರು.