Select Your Language

Notifications

webdunia
webdunia
webdunia
webdunia

3 ಕೋಟಿ ಕೊಡದಿದ್ರೆ ಮುಗಿಸುತ್ತೇವೆ: ಕುಂದ್ರಾಗೆ ರವಿಪೂಜಾರಿ ಬೆದರಿಕೆ

3 ಕೋಟಿ ಕೊಡದಿದ್ರೆ ಮುಗಿಸುತ್ತೇವೆ: ಕುಂದ್ರಾಗೆ ರವಿಪೂಜಾರಿ ಬೆದರಿಕೆ
ನವದೆಹಲಿ , ಮಂಗಳವಾರ, 23 ಸೆಪ್ಟಂಬರ್ 2014 (11:48 IST)
ಇತ್ತೀಚೆಗೆ ಬೊಮನ್ ಇರಾನಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆಗಳು ಬಂದಿವೆಯೆಂದು ವರದಿಯಾಗಿತ್ತು. ಬೊಮನ್ ಇರಾನಿ ಬಳಿಕ ಪಾತಕಿ ರವಿ ಪೂಜಾರಿಯಿಂದ ರಾಜ್ ಕುಂದ್ರಾಗೆ ಬೆದರಿಕೆ ಕರೆಗಳು ಬರುತ್ತಿವೆ. ಕುಂದ್ರಾ ಅವರ ಸಹಾಯಕನಿಗೆ ರವಿ ಪೂಜಾರಿ ಎರಡು ಕರೆಗಳನ್ನು ಮಾಡಿದ್ದು, ಮೊದಲ ಕರೆಯಲ್ಲಿ 3 ಕೋಟಿ ರೂ. ಮೊತ್ತದ ಬೇಡಿಕೆಯನ್ನು ಅವನು ಮಂಡಿಸಿದ್ದಾನೆ.

ಎರಡನೇ ಕರೆಯನ್ನು ತನ್ನ ಸಂದೇಶ  ರಾಜ್ ಕುಂದ್ರಾಗೆ ರವಾನಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಾಡಿದ್ದ.  ರಾಜ್ ಕುಂದ್ರಾ ರಾಜಸ್ಥಾನ ಐಪಿಎಲ್ ತಂಡದ ಸಹ ಮಾಲೀಕರಾಗಿದ್ದರು ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯನ್ನು ವಿವಾಹವಾಗಿದ್ದಾರೆ.

ಕುಂದ್ರಾಗೆ ಕರೆಗಳು ಬಂದ ಬಳಿಕ ಅವರ ಜುಹು ನಿವಾಸದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸುಲಿಗೆ  ನಿಗ್ರಹ ವಿಭಾಗದಲ್ಲಿ ಅವರು ದೂರನ್ನು ಸಲ್ಲಿಸಿದ್ದಾರೆ. 
 

Share this Story:

Follow Webdunia kannada