Select Your Language

Notifications

webdunia
webdunia
webdunia
webdunia

ಪ್ರೀತಿಯ ಕೆಲಸ ಮಾಡುತ್ತಲೇ ವಿದಾಯ ಹೇಳಿದ ಕಲಾಂ

ಪ್ರೀತಿಯ ಕೆಲಸ ಮಾಡುತ್ತಲೇ ವಿದಾಯ ಹೇಳಿದ ಕಲಾಂ
ನವದೆಹಲಿ , ಮಂಗಳವಾರ, 28 ಜುಲೈ 2015 (12:06 IST)
ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸಂಸತ್ತಿನ ಉಭಯ ಸದನಗಳಲ್ಲಿ ಅಗಲಿದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಗೆ ಸಂತಾಪ ಸೂಚಿಸಲಾಯಿತು.

ಉಭಯ ಸದನಗಳ ಸದಸ್ಯರು ಅಬ್ದುಲ್ ಕಲಾಂ ಸಾಧನೆಯನ್ನು ನೆನೆದರು.
 
ಪ್ರೀತಿಯ ಕೆಲಸ ಮಾಡುತ್ತಲೇ  ಕಲಾಂ ಕೊನೆಯುಸಿರೆಳೆದರು. ಅವರು ದೇಶಕ್ಕೆ ಎಣಿಸಲಾರದಷ್ಟು ಕೊಡುಗೆ ನೀಡಿದ್ದಾರೆ. ಅವರ ಮಾತುಗಳು ನಮಗೆಲ್ಲರಿಗೂ ಆದರ್ಶ. ಉತ್ಸಾಹದ ಚಿಲುಮೆಯಾಗಿದ್ದ ಅವರು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಅವರ ದಿವ್ಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ. 
 
1 ನಿಮಿಷಗಳ ಕಾಲ ಮೌನಾಚರಣೆ ಸಂತಾಪ ಸೂಚನೆ ಮಾಡಿದ ಬಳಿಕ ಲೋಕಸಭೆಯ ಕಲಾಪನ್ನು ಎರಡು ದಿನಗಳ ಕಾಲ ಮುಂದೂಡಲಾಯಿತು.
 
ರಾಜ್ಯಸಭೆಯಲ್ಲಬೂ ಸಹ ಕಲಾಂ ಅವರಿಗೆ ಶ್ರಂದ್ಧಾಜಲಿ ಸಲ್ಲಿಸಿದ ಬಳಿಕ ರಾಷ್ಟ್ರೀಯ ಶೋಕಾಚರಣೆ ನಿಮಿತ್ತ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

Share this Story:

Follow Webdunia kannada