Webdunia - Bharat's app for daily news and videos

Install App

ವಿದ್ಯಾರ್ಥಿಗಳಿಗೆ ಗೋಮಾತೆಯ ಪತ್ರ

Webdunia
ಮಂಗಳವಾರ, 10 ಮೇ 2016 (11:47 IST)
ತಮ್ಮ ಹಿಂದೂತ್ವ ಅಜೆಂಡಾವನ್ನು ಮಂದುವರೆಸಿರುವ ರಾಜಸ್ಥಾನ್ ಸರ್ಕಾರ ಶಾಲಾ ಪಠ್ಯ ಪುಸ್ತಕವನ್ನು ಪರಿಷ್ಕರಿಸಿದ್ದು, ಅದರಲ್ಲಿ ಆಕಳು  ವಿದ್ಯಾರ್ಥಿಗಳಿಗೆ ಪತ್ರ ಬರೆಯುವ ಒಂದು ಅಧ್ಯಾಯವನ್ನು ಸೇರಿಸಿದೆ. 
 
ಐದನೆಯ ತರಗತಿ ಮಕ್ಕಳಿಗೆ ಪರಿಚಯಿಸಿರುವ ಹಿಂದಿ ಭಾಷಾ ಪುಸ್ತಕದಲ್ಲಿ ಈ ಪಾಠವನ್ನು ಸೇರಿಸಲಾಗಿದೆ. ಪಾಠದಲ್ಲಿ ದೊಡ್ಡ ಆಕಳ ಚಿತ್ರವಿದ್ದು, ಆ ಚಿತ್ರದ ಒಳಗೆ ಹಿಂದೂ ದೇವರುಗಳ ಚಿತ್ರವಿದೆ. 
 
ಪತ್ರದಲ್ಲಿ ಆಕಳು ವಿದ್ಯಾರ್ಥಿಗಳನ್ನು ನನ್ನ ಮಕ್ಕಳೇ ಎಂದು ಸಂಬೋಧಿಸಿದ್ದು, ಪತ್ರ ಹೀಗೆ ಮುಂದುವರೆದಿದೆ,  "ನಾನು ಪ್ರತಿಯೊಬ್ಬರಿಗೆ ಬಲ, ಬುದ್ಧಿವಂತಿಕೆ, ದೀರ್ಘಾಯುಷ್ಯ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಿದ್ದೇನೆ. ನನ್ನ ಮಹತ್ವವನ್ನು ತಿಳಿದವರು ನನ್ನನ್ನು ತಾಯಿಯಂತೆ ಪರಿಗಣಿಸಿ. ನಾನು ಸಹ ನಿಮ್ಮನ್ನು ನನ್ನ ಮಕ್ಕಳಂತೆ ಪ್ರೀತಿಸುತ್ತೇನೆ". 
 
ಪತ್ರದ ಮುಂದಿನ ಸಾಲಲ್ಲಿ ಆಕಳು ತನ್ನಿಂದಾಗುವ ಪ್ರಯೋಜನಗಳನ್ನು ಹೇಳಿಕೊಳ್ಳುವಂತೆ ಬರೆಯಲಾಗಿದೆ. "ನಾನು ಹಾಲು, ಬೆಣ್ಣೆ ಮತ್ತು ತುಪ್ಪದ ರೂಪದಲ್ಲಿ ಜೀವಾಮೃತವನ್ನು ಉತ್ಪಾದಿಸುತ್ತೇನೆ. ನನ್ನ ಮೂತ್ರ ಮತ್ತು ಸಗಣಿ ಔಷಧಿ, ಗೊಬ್ಬರ ಮತ್ತು ಕೀಟನಾಶಕವಾಗಿ ಉಪಯೋಗಿಸಲ್ಪಡುತ್ತದೆ. ನನ್ನ ಸಂತತಿ, ಹೋರಿ ಕೃಷಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಉಸಿರಾಡುವ ಮೂಲಕ ನಾನು ಪರಿಸರವನ್ನು ಶುದ್ಧಗೊಳಿಸುತ್ತೇನೆ".
 
ಈ ಕುರಿತು ಪ್ರತಿಕ್ರಿಯಿಸಿರುವ ಗೋಪಾಲನ ಸಚಿವ ಒಟಾರಾಮ್ ದೇವಾಸಿ, ಇದು ಆಕಳ ಪ್ರಯೋಜನದ ಜಾಗೃತಿ ಮೂಡಿಸಲು ಕೈಗೊಂಡಿರುವ ಧನಾತ್ಮಕ ನಡೆ ಎಂದಿದ್ದಾರೆ. 
 
ಈ ಅಧ್ಯಾಯವನ್ನು ಕೇವಲ ಓದಲು ಮಾತ್ರ ಅಳವಡಿಸಲಾಗಿದ್ದು ಪರೀಕ್ಷಾ ಪಠ್ಯದಲ್ಲಿ ಇದನ್ನು ಸೇರಿಸಲಾಗಿಲ್ಲ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments