Webdunia - Bharat's app for daily news and videos

Install App

ಮಧ್ಯಪ್ರದೇಶದಲ್ಲಿ ಫ್ರೀ ಈರುಳ್ಳಿ

Webdunia
ಶುಕ್ರವಾರ, 26 ಆಗಸ್ಟ್ 2016 (08:47 IST)
ಸೂಕ್ತ ಮೌಲ್ಯ ಸಿಗದೇ ಗೋದಾಮು, ಮಂಡಿಗಳಲ್ಲಿ ಕೊಳೆತು ನಾರುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿಯನ್ನು ಉಚಿತವಾಗಿ ನೀಡಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ. 


 
ಈ ನಿರ್ಧಾರದಿಂದ ಸರ್ಕಾರಕ್ಕೆ ಸುಮಾರು 100ಕೋಟಿ ನಷ್ಟವಾಗಲಿದೆಯಾದರೂ 30 ಕೋಟಿ ರೂ ಬೆಲೆಯ 
3.28 ಲಕ್ಷ ಕ್ವಿಂಟಾಲ್ ಈರುಳ್ಳಿ ಗೋದಾಮುಗಳಲ್ಲಿ ಕೊಳೆತು ಹೋದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
 
ಮೇ ತಿಂಗಳಿಂದ ಈರುಳ್ಳಿ ಬೆಲೆ ನೆಲಕ್ಕೆ ಕುಸಿದಿದ್ದು , ಬೆಲೆ ಚೇತರಿಕೆ ಕಾಣದೇ ರೈತರು ಕಂಗಾಲಾಗಿದ್ದಾರೆ. 
 
ರೈತರಿಂದ ನೇರವಾಗಿ ರೂಪಾಯಿ ಕೆಜಿಗೆ 6 ರೂಪಾಯಿಯಂತೆ  10.4 ಲಕ್ಷ ಕ್ವಿಂಟಾಲ್ ಈರುಳ್ಳಿಯನ್ನು ಸರ್ಕಾರ ಖರೀದಿಸಿತ್ತು. ಆದರೆ ರಾಜ್ಯದಲ್ಲಿ ಸೂಕ್ತ ದಾಸ್ತಾನು ವ್ಯವಸ್ಥೆ ಇಲ್ಲದೇ, ಅದರಲ್ಲೂ ವಿಪರೀತ ಮಳೆಯಾಗುತ್ತಿರುವುದರಿಂದ ಈರುಳ್ಳಿ ಗೋದಾಮುಗಳಲ್ಲಿಯೇ ಕೊಳೆಯಲಾರಂಭಿಸಿತು. ಹರಾಜಿನಲ್ಲಿ ಪಾಲ್ಗೊಂಡವರು ಸಹ ಅತಿ ಕಡಿಮೆ ಬೆಲೆಗೆ ಕೇಳತೊಡಗಿದಾಗ ಬೇರೆ ದಾರಿ ಕಾಣದ ಸರ್ಕಾರ ಸಾಗಾಣಿಕೆ ವೆಚ್ಚವನ್ನಾದರೂ ಮರಳಿ ಪಡೆಯಲು 1 ಟೋಕನ್‌ಗೆ 1 ರೂಪಾಯಿ/ಕೆಜಿ  ನೀಡಲು ಮುಂದಾಗಿದೆ ಎಂದು ಮಧ್ಯಪ್ರದೇಶ ರಾಜ್ಯ ಸಹಕಾರ ಮಾರಾಟ ಒಕ್ಕೂಟದ ಪ್ರಧಾನ ವ್ಯವಸ್ಥಾಪಕರಾದ ಯೋಗೇಶ್ ಜೋಷಿ ಹೇಳಿದರು.
 
ಬೇರೆ ರಾಜ್ಯಗಳಲ್ಲಿ ಸಹ ಈರುಳ್ಳಿ ಬೆಳೆಗಾರರು ದಯನೀಯ ಸ್ಥಿತಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಈರುಳ್ಳಿ ಸಗಟು ಮಾರಾಟ ಬೆಲೆ ನೆಲಕಚ್ಚಿದ್ದು, ಹರಾಜೊಂದರಲ್ಲಿ ರೈತನಿಗೆ ಒಂದು ಕೆ.ಜಿ ಈರುಳ್ಳಿಯನ್ನು ಐದು ಪೈಸೆಗೆ ಕೇಳಲಾಗಿದೆ. ಇದು ಸಗಟು ಮಾರುಕಟ್ಟೆಯಲ್ಲಿ ರೈತರು ಎದುರಿಸುತ್ತಿರುವ ದುಃಸ್ಥಿತಿಯನ್ನು ಜಾಹೀರುಗೊಳಿಸಿದೆ.
 
ಈರುಳ್ಳಿಯ ಅತಿರಿಕ್ತ ಉತ್ಪಾದನೆಯಿಂದಾಗಿ ಕಳೆದ ಎರಡು ತಿಂಗಳಿಂದ ರೈತರ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಮಂಗಳವಾರ ಹರಾಜಿನಲ್ಲಿ ಪಾಲ್ಗೊಂಡಿದ್ದ ನನಗೆ ಒಂದು ಕಿಲೋಗೆ ಐದು ಪೈಸೆಯನ್ನು ಆಫರ್ ಮಾಡಲಾಯಿತು ಎಂದು ನಿಪಾಡ್ ತಾಲ್ಲೂಕಿನ ಸೈಖೇಡಾದ ರೈತ ಸುಧಾಕರ್ ದಾರದೆ ಅಳಲು ತೋಡಿಕೊಂಡಿದ್ದಾರೆ. 
 
ತಾನು ಕಷ್ಟಪಟ್ಟು ಬೆಳೆದಿರುವ ಉತ್ಪನ್ನಕ್ಕೆ ಬೆಲೆಯೇ ಸಿಗದ ನೋವಿನಲ್ಲಿ ರೈತ ಸರಕಿನೊಂದಿಗೆ ಮನೆಗೆ ಹಿಂತಿರುಗಿದ್ದಾನೆ.
 
ಬರದ ಪರಿಣಾದಿಂದಾಗಿ ಆಗಸ್ಟ್ 21, 2015ರಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 5824ಕ್ಕೆ ಏರಿತ್ತು. ಆಗ ರೈತರು ಪ್ರತಿ ಕೆಜಿಗೆ 54 ರೂಪಾಯಿಯನ್ನು ಪಡೆದಿದ್ದರು. ಈರುಳ್ಳಿ ಬೆಲೆ ಈ ಮಟ್ಟದಲ್ಲಿ ಏರಿದ್ದನ್ನು ಕಂಡ ರೈತರು ಈ ಬಾರಿ ಬೆಳೆಯಲು ಇದೇ ಬೆಳೆಯನ್ನು ಆಯ್ದುಕೊಂಡರು. 
 
ಇನ್ನೊಂದು ಕಾರಣವೇನೆಂದರೆ ಬರದ ಕಾರಣಕ್ಕೆ ಹಲವಾರು ರೈತರು ಕಬ್ಬಿನ ಬದಲಾಗಿ ಈರುಳ್ಳಿಯನ್ನೇ ಆಯ್ದುಕೊಂಡರು. ಆದರೆ ಈಗ ಅತಿರಿಕ್ತ ಉತ್ಪಾದನೆಯಿಂದಾಗಿ ಬೆಲೆಯೇ ಇಲ್ಲದಂತಾಗಿದೆ ಎಂದು ಪುಣೆ ಮೂಲದ ಕೃಷಿ ವಿಶ್ಲೇಷಕರಾದ ದೀಪಕ್ ಚವನ್ ಹೇಳುತ್ತಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಹೀಗಾದ್ರೆ ಯುವಕರ ಕತೆ ಏನು, ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನೇ ಕೈಹಿಡಿದ ತಂದೆ

ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಆರೋಗ್ಯದಲ್ಲಿ ಚೇತರಿಕೆ: ಮಹಿಳೆಗೆ ಒತ್ತಡ, ದೂರು

ಏರ್‌ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಹೆಚ್ಚಿದ ಬೇಡಿಕೆ

ಮುಂದಿನ ಸುದ್ದಿ
Show comments