Select Your Language

Notifications

webdunia
webdunia
webdunia
webdunia

ಶಾಲಾ ವಾಹನಕ್ಕೆ ರೈಲು ಡಿಕ್ಕಿಹೊಡೆದು 20 ಮಕ್ಕಳ ದಾರುಣ ಸಾವು

ಶಾಲಾ ವಾಹನಕ್ಕೆ ರೈಲು ಡಿಕ್ಕಿಹೊಡೆದು 20 ಮಕ್ಕಳ ದಾರುಣ ಸಾವು
ಮೇದಕ್ , ಗುರುವಾರ, 24 ಜುಲೈ 2014 (10:42 IST)
ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಖಾಸಗಿ ಶಾಲಾವಾಹನಕ್ಕೆ ರೈಲು ಡಿಕ್ಕಿ ಹೊಡೆದು ಶಾಲಾ ಬಸ್ ಚಾಲಕ ಸೇರಿ 20 ಮಕ್ಕಳು ದಾರುಣವಾಗಿ ಮೃತಪಟ್ಟ  ದುರಂತ ಸಂಭವಿಸಿದೆ.  ಮೇದಕ್ ಜಿಲ್ಲೆಯ ಮಾಸಾಯಿಪೇಟೆ ಬಳಿ ಈ ದುರ್ಘಟನೆ ಸಂಭವಿಸಿದೆ.

ತೂಪ್ರಾನ್‌ನಲ್ಲಿರುವ ಕಾಕತೀಯ ಶಾಲೆಗೆ ಈ ಬಸ್ ಸೇರಿದ್ದು,  ಇಸ್ಲಾಂಪುರದಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಸಿಗ್ನಲ್ ರಹಿತ ರೈಲ್ವೆ ಕ್ರಾಸಿಂಗ್ ದಾಟುತ್ತಿದ್ದಾಗ ವೇಗವಾಗಿ ಬಂದ ನಾಂದೇಡ್ ಪ್ಯಾಸೆಂಜರ್ ರೈಲು  ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ತೂಪ್ರಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಖಾಸಗಿ ಶಾಲಾ ಬಸ್‌ನಲ್ಲಿ 38 ಮಕ್ಕಳು ಪ್ರಯಾಣಿಸುತ್ತಿದ್ದರು. ತೆಲಂಗಾಣದ ಸಂಸದೀಯ ವ್ಯವಹಾರ ಸಚಿವ ಹರೀಶ್ ರಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಈ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada