Select Your Language

Notifications

webdunia
webdunia
webdunia
webdunia

ಕೇಂದ್ರದಲ್ಲಿರುವುದು ಉದ್ಯಮಪತಿಗಳ ಸರ್ಕಾರ: ರಾಹುಲ್ ಗಾಂಧಿ

ಕೇಂದ್ರದಲ್ಲಿರುವುದು ಉದ್ಯಮಪತಿಗಳ ಸರ್ಕಾರ: ರಾಹುಲ್ ಗಾಂಧಿ
ಪುಲ್ವಾಮಾ , ಗುರುವಾರ, 27 ಆಗಸ್ಟ್ 2015 (16:46 IST)
ರೈತರ ಆತ್ಮಹತ್ಯೆ ವಿಷಯವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಮೇಲೆ ಪ್ರಖರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರದಲ್ಲಿರುವುದು ಉದ್ಯಮಪತಿಗಳ ಸರ್ಕಾರ ಎಂದು ಜರಿದಿದ್ದಾರೆ.
 
ಪುಲ್ವಾಮಾದಲ್ಲಿ ರೈತ ಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, 'ಸಂಪೂರ್ಣ ದೇಶದ ಕೃಷಿಕರು ಇಂದು ಕಷ್ಟದಲ್ಲಿ ಸಿಲುಕಿದ್ದಾರೆ. ಆದರೆ ಸರ್ಕಾರ ಎರಡು, ಮೂರು ದೊಡ್ಡ ಉದ್ಯಮಪತಿಗಳಿಗಷ್ಟೇ ಮೀಸಲಾಗಿದೆ', ಎಂದು ಕಿಚಾಯಿಸಿದ್ದಾರೆ. 
 
ರಾಹುಲ್ ಗಾಂಧಿ ಎರಡು ದಿನಗಳ ಜಮ್ಮು ಕಾಶ್ಮೀರ ಪ್ರವಾಸದಲ್ಲಿದ್ದಾರೆ
 
ನಿನ್ನೆ ಪೂಂಚ್ ಜಿಲ್ಲೆಯ ಬಾಲಾಕೋಟ್​ನಲ್ಲಿ, ಪಾಕಿಸ್ತಾನದ ಶೆಲ್ ದಾಳಿಗೆ ಸಿಲುಕಿ ನಲುಗಿ ಹೋಗಿರುವ ಗ್ರಾಮಸ್ಥರನ್ನು ಭೇಟಿಯಾದ ರಾಹುಲ್ ಅವರಿಗೆ ಸಾಂತ್ವನ ಹೇಳಿದರು. 

Share this Story:

Follow Webdunia kannada