Select Your Language

Notifications

webdunia
webdunia
webdunia
webdunia

ಕೇರಳ: ಒಳಜಗಳ ನಿಲ್ಲಿಸಲು ಮುಖಂಡರಿಗೆ ರಾಹುಲ್ ಗಾಂಧಿ ಸಲಹೆ

ಕೇರಳ: ಒಳಜಗಳ ನಿಲ್ಲಿಸಲು ಮುಖಂಡರಿಗೆ ರಾಹುಲ್ ಗಾಂಧಿ ಸಲಹೆ
ತಿರುವನಂತಪುರಂ(ಕೇರಳ) , ಬುಧವಾರ, 10 ಫೆಬ್ರವರಿ 2016 (16:48 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷವಾದ ಸಿಪಿಐ(ಎಂ) ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
 
ಕಾಂಗ್ರೆಸ್ ಪಕ್ಷದಲ್ಲಿರುವ ಒಳಜಗಳಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಬಹುದು ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಭೆಯಲ್ಲಿ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.
 
ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಒಳಜಗಳಗಳು ಹೆಚ್ಚಾಗಿವೆ. ಅಂತರಿಕ ವೈಮನಸ್ಸು ಬಿಟ್ಟು ಮತ್ತೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆಯನ್ನು ಹಿಡಿಯಲು ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕಾಗಿದೆ. ಒಳಜಗಳವಾಡುವಂತಹ ಸಮಯ ಇದಲ್ಲ ಎಂದು ಸಲಹೆ ನೀಡಿದರು. 
 
ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಭಾವಂತ ನಾಯಕರಿರುವುದರಿಂದ ಪಕ್ಷ ಗೆಲ್ಲಲು ಮಾರ್ಗದರ್ಶನ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದು ಮುಂದಿನ ಐದು ವರ್ಷಗಳ ಅಧಿಕಾರ ನಡೆಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
 
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಹಿಂದೂಗಳು ಮತ್ತು ಮುಸ್ಲಿಮರಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸಿ ಅಧಿಕಾರದ ಗದ್ದುಗೆ ಪಡೆಯಬೇಕು ಎನ್ನುವ ರಣತಂತ್ರ ರೂಪಿಸಿದ್ದಾರೆ ಎಂದು ಕಿಡಿಕಾರಿದರು.

Share this Story:

Follow Webdunia kannada