Select Your Language

Notifications

webdunia
webdunia
webdunia
webdunia

ನಿತೀಶ್ ರಾಜಕೀಯ ಪಿತೂರಿ ಮೊದಲೇ ಗೊತ್ತಿತ್ತು ಎಂದ ರಾಹುಲ್ ಗಾಂಧಿ

ನಿತೀಶ್ ರಾಜಕೀಯ ಪಿತೂರಿ ಮೊದಲೇ ಗೊತ್ತಿತ್ತು ಎಂದ ರಾಹುಲ್ ಗಾಂಧಿ
NewDelhi , ಗುರುವಾರ, 27 ಜುಲೈ 2017 (11:02 IST)
ನವದೆಹಲಿ: ಬಿಹಾರದಲ್ಲಿ ರಾಜಕೀಯ ಹೈಡ್ರಾಮಾದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿತೀಶ್ ಕುಮಾರ್ ರಾಜಕೀಯ ಪಿತೂರಿ ಬಗ್ಗೆ ಕೆಲವು ದಿನಗಳ ಹಿಂದೆಯೇ ಸುಳಿವು ಸಿಕ್ಕಿತ್ತು ಎಂದಿದ್ದಾರೆ.


ಇಂದಿನ ದಿನ ರಾಜಕೀಯ ನಾಯಕರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ನಿತೀಶ್ ಮಹಾಘಟಬಂಧನ್ ಮುರಿಯಲು 3-4 ತಿಂಗಳಿನಿಂದಲೂ ಯೋಜನೆ ನಡೆಸಿದ್ದರು. ಈ ಮೂಲಕ ನಿತೀಶ್ ಬಿಹಾರ ಜನತೆಗೆ ಮೋಸ ಮಾಡಿದ್ದಾರೆ’ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದೆಡೆ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಸಿನಿಮಾ ಹಾಡೊಂದಕ್ಕೆ ನಿತೀಶ್ ನಡೆಯನ್ನು ಹೋಲಿಸಿದ್ದಾರೆ. ‘ನಾ ನಾ ಕರ್ತೇ ಪ್ಯಾರ್ ಕರ್ ದಿಯಾ’ ಹಾಡನ್ನು ನಿತೀಶ್ ಕುಮಾರ್ ನಡೆಗೆ ಹೋಲಿಸಿದ್ದಾರೆ. ಬಿಜೆಪಿಗೂ ನಮ್ಮ ಪಕ್ಷಕ್ಕೂ ಸೈದ್ಧಾಂತಿಕ ವಿರೋಧವಿದೆ ಎನ್ನುತ್ತಲೇ ಇದೀಗ  ಅದೇ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ ಎಂದು ಅಖಿಲೇಶ್ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರಕ್ಕೊಳಗಾಗುವ ಶಿಕ್ಷೆ!