Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ನಾಗರಿಕತ್ವ ವಿವಾದ: ಸಿಬಿಐ ತನಿಖೆಗೆ ನಿರ್ದೇಶನ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್

ರಾಹುಲ್ ಗಾಂಧಿ ನಾಗರಿಕತ್ವ ವಿವಾದ: ಸಿಬಿಐ ತನಿಖೆಗೆ ನಿರ್ದೇಶನ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್
ನವದೆಹಲಿ , ಸೋಮವಾರ, 30 ನವೆಂಬರ್ 2015 (14:31 IST)
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಗರಿಕತ್ವ ವಿವಾದದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು ಎನ್ನುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
 
ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠ, ಇಂದು ವಿಚಾರಣೆ ನಡೆಸಿ ಪಿಐಎಲ್ ಸಲ್ಲಿಸಿದ ವಕೀಲರ ಅರ್ಜಿಯಲ್ಲಿ ಯಾವುದೇ ಸತ್ಯಾಂಶ ಕಂಡುಬರದಿರುವ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
 
ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದ ದೂರುದಾರರು, ಸತ್ಯಾಂಶಗಳನ್ನು ಪರಿಗಣಿಸದೆ ರಾಹುಲ್ ಗಾಂಧಿಯವರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. 
 
ಒಂದು ವೇಳೆ, ರಾಹುಲ್ ಗಾಂಧಿ ಚುನಾವಣೆ ನೀತಿಗಳನ್ನು ಉಲ್ಲಂಘಿಸಿದಲ್ಲಿ ಚುನಾವಣೆ ಆಯೋಗ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮಕೈಗೊಳ್ಳಬಹುದಾಗಿದೆ ಎಂದು ಸಲಹೆ ನೀಡಿದೆ.
 
ಇತ್ತೀಚೆಗೆ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಹೇಳಿಕೆಯೊಂದನ್ನು ನೀಡಿ, ಇಂಗ್ಲೆಂಡ್‌ನಲ್ಲಿರುವ ಕಂಪೆನಿಯ ದಾಖಲೆಗಳ ಪ್ರಕಾರ ರಾಹುಲ್ ಗಾಂಧಿ ತಮ್ಮನ್ನು ತಾವು ಬ್ರಿಟನ್ ನಾಗರಿಕರು ಎಂದು ಘೋಷಿಸಿರುವುದಾಗಿ ಆರೋಪಿಸಿದ್ದರು. 

Share this Story:

Follow Webdunia kannada