Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಗೆ ನೋಟು ನಿಷೇಧ ಎಂದರೆ ಗೊತ್ತಿಲ್ಲ: ಸಚಿವ ರವಿಶಂಕರ್ ಪ್ರಸಾದ್

ರಾಹುಲ್ ಗಾಂಧಿಗೆ ನೋಟು ನಿಷೇಧ ಎಂದರೆ ಗೊತ್ತಿಲ್ಲ: ಸಚಿವ ರವಿಶಂಕರ್ ಪ್ರಸಾದ್
ಪಾಟ್ನಾ , ಶನಿವಾರ, 24 ಡಿಸೆಂಬರ್ 2016 (14:17 IST)
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನೋಟು ನಿಷೇಧ ಎಂದರೆ ಏನು ಅನ್ನುವುದೇ ಗೊತ್ತಿಲ್ಲ. ನೋಟು ನಿಷೇಧ ಬಗ್ಗೆ ಕಲಿತು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ರವಿಶಂಕರ್ ಪ್ರಸಾದ್ ಲೇವಡಿ ಮಾಡಿದ್ದಾರೆ.
 
ಭ್ರಷ್ಟಾಚಾರಿಗಳು ಮತ್ತು ಕಪ್ಪು ಹಣ ಹೊಂದಿದವರ ವಿರುದ್ಧ ನೋಟು ನಿಷೇಧ ಬ್ರಹ್ಮಾಸ್ತ್ರವಾಗಿದೆ. ಇದರಿಂದ ಬಡವರಿಗೆ ಲಾಭವಾಗಲಿದೆ. ನೋಟು ನಿಷೇಧಧ ಪರಿಣಾಮಗಳನ್ನು ಅರಿಯದೆ ಹೇಳಿಕೆ ನೀಡುವುದು ರಾಹುಲ್ ಗಾಂಧಿಗೆ ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
 
ನೋಟು ನಿಷೇಧ ವಿರೋಧಿಸುವ ಮುನ್ನ ಅದರ ಲಾಭ ನಷ್ಟಗಳ ಬಗ್ಗೆ ರಾಹುಲ್ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಕಿವಿಮಾತು ಹೇಳಿದರು.
 
ಆದರೆ, ಪ್ರಧಾನಮಂತ್ರಿ ಮೋದಿಯ ಭ್ರಷ್ಟಾಚಾರದ ಹೇಳಿಕೆ ನೀಡಿದ ರಾಹುಲ್ ಗಾಂಧಿಯ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನಿರಾಕರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧದಿಂದ ದೀರ್ಘಾವಧಿಯಲ್ಲಿ ಲಾಭ: ಪ್ರಧಾನಿ ಮೋದಿ