Select Your Language

Notifications

webdunia
webdunia
webdunia
webdunia

ರಾಮೇಶ್ವರದತ್ತ ರಾಹುಲ್ ಗಾಂಧಿ

ರಾಮೇಶ್ವರದತ್ತ ರಾಹುಲ್ ಗಾಂಧಿ
ಮಧುರೈ , ಗುರುವಾರ, 30 ಜುಲೈ 2015 (09:12 IST)
ಇಂದು ರಾಮೇಶ್ವರಂನಲ್ಲಿ ನಡೆಯುತ್ತಿರುವ ಮಾಜಿ ರಾಷ್ಟ್ರಪತಿ  ಅಬ್ದುಲ್ ಕಲಾಂ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮಿಳುನಾಡಿಗೆ ಆಗಮಿಸಿದ್ದಾರೆ.
 
ಈಗಾಗಲೇ ಮಧುರೈ ತಲುಪಿರುವ ರಾಹುಲ್ ಗಾಂಧಿ ಇಲ್ಲಿಂದ ರಾಮೇಶ್ವರಂಗೆ ತೆರಳಲಿದ್ದಾರೆ. ರಾಹುಲ್ ಅವರೊಂದಿಗೆ ಕಾಂಗ್ರೆಸ್‌ನ ಪ್ರಮುಖ ನಾಯಕ ಗುಲಾಂ ನಬಿ ಆಜಾದ್ ಸಹ ಆಗಮಿಸಿದ್ದಾರೆ.
 
ಕಲಾಂ ಅಂತ್ಯಸಂಸ್ಕಾರಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಆಗಮಿಸುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಹ ಈ ಸಂದರ್ಭದಲ್ಲಿ ಹಾಜರಿರಲಿದ್ದಾರೆ.
 
ಆದರೆ ಅನಾರೋಗ್ಯದ ಕಾರಣದಿಂದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಲಾಂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಿಲ್ಲ. 

Share this Story:

Follow Webdunia kannada