Webdunia - Bharat's app for daily news and videos

Install App

ಇಳಿಯಿತು ಪ್ರೇಮದ ಅಮಲು: ಅತ್ತೆಯನ್ನೇ ಮದುವೆಯಾದವನಿಗೆ ಮತ್ತೀಗ ಆಕೆಯ ಮಗಳೇ ಬೇಕಂತೆ

Webdunia
ಬುಧವಾರ, 17 ಆಗಸ್ಟ್ 2016 (14:45 IST)
ಕಳೆದ ಕೆಲ ವಾರಗಳ ಹಿಂದೆ ಒಬ್ಬ ಮಹಿಳೆ ಮತ್ತು ಆಕೆಯ ಅಳಿಯನ ನಡುವಿನ ಪ್ರೇಮಕಥೆ ಸಾಕಷ್ಟು ಸುದ್ದಿ ಮಾಡಿತ್ತು. ಮತ್ತೀಗ ಈ ಅಸಾಮಾನ್ಯ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್ ಕಂಡು ಬಂದಿದೆ. ಅವರಿಬ್ಬರಿಗೂ ತಮ್ಮ ತಪ್ಪಿನ ಅರಿವಾಗಿದ್ದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕೆಲ ದಿನಗಳ ಹಿಂದೆ ವಿವಾಹವಾಗಿದ್ದ ಬಿಹಾರದ ಮಧೇಪುರ ಜಿಲ್ಲೆಯ ಪುರೈನಿ ನಿವಾಸಿ 22 ವರ್ಷದ ಸೂರಜ್ ಮಹ್ತೊ ಮತ್ತು 42 ವರ್ಷದ ಆಶಾ ದೇವಿ ತಮ್ಮ ಮದುವೆಯನ್ನು ಮುರಿದುಕೊಳ್ಳಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ತಪ್ಪಿನ ಅರಿವಾಗಿದೆ, ನಾವು ಮರಳಿ ತಮ್ಮ ತಮ್ಮ ಸಂಗಾತಿಗಳನ್ನು ಸೇರಲು ಬಯಸುತ್ತೇವೆ ಎಂದು ಅವರಿಬ್ಬರು ಪಶ್ಚಾತಾಪ ವ್ಯಕ್ತ ಪಡಿಸಿದ್ದಾರೆ. 
 
ಘಟನೆ ಹಿನ್ನೆಲೆ: 
 
ಆಶಾದೇವಿ ಮಗಳ ಜತೆ ಸೂರಜ್ ಮೆಹ್ತೋಗೆ ಮದುವೆಯಾಗಿತ್ತು. ಅಳಿಯನಿಗೆ ಆರೋಗ್ಯ ಕೆಟ್ಟಿದೆ ಎಂದು ಒಮ್ಮೆ ಮಗಳ ಮನೆಗೆ ಹೋಗಿದ್ದ ಅತ್ತೆಗೆ ಆತನ ಮೇಲೆ ಪ್ರೀತಿ ಹುಟ್ಟಿ ಬಿಟ್ಟಿದೆ. ಆತನ ಸ್ಥಿತಿ ಏನೂ ಪ್ರತ್ಯೇಕವಾಗಿರಲಿಲ್ಲ. ಮನೆಗೆ ಹಿಂತಿರುಗಿದ ಆಶಾದೇವಿ ಅಳಿಯನ ಜತೆ ಪೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡ ತೊಡಗಿದಳು. 
 
ಅವರಿಬ್ಬರಿಗೂ ಇದು ಸರಿಯಲ್ಲ ಎಂದು ಅರ್ಥ ಮಾಡಿಸಲು ಸೂರಜ್ ಪತ್ನಿ ಲಲಿತಾ ಮತ್ತು ಗ್ರಾಮಸ್ಥರು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು.  ಬೇರೆ ದಾರಿ ಇಲ್ಲದೇ ಗ್ರಾಮ ಪಂಚಾಯತಿ ಮದುವೆಯಾಗಿರೆಂದು ಅನುಮತಿ ಕೊಟ್ಟಿತು. ಬಳಿಕ ಅವರಿಬ್ಬರು ಒಟ್ಟಿಗೆ ವಾಸಿಸತೊಡಗಿದರು.
 
ಸೂರಜ್ ಪತ್ನಿ ದೆಹಲಿಗೆ ಹೋಗಿ ತಂದೆಯ ಆಶ್ರಯದಲ್ಲಿ ಜೀವನ ನಡೆಸ ಹತ್ತಿದಳು. 
 
ಆದರೆ ಕೆಲವೇ ದಿನಗಳಲ್ಲಿ ಅವರಿಬ್ಬರಿಗೆ ಹಿಡಿದ ಪ್ರೇಮದ ಹುಚ್ಚು ಇಳಿದು ಬಿಟ್ಟಿದೆ. ನಮ್ಮಿಬ್ಬರಿಗೂ ತಪ್ಪಿನ ಅರಿವಾಗಿದೆ. ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೆಂದೂ ನಾನು ಆಶಾದೇವಿಯವರನ್ನು ಪತ್ನಿ ರೂಪದಲ್ಲಿ ನೋಡಲಾರೆ. ಅತ್ತೆ ಎಂಬ ಗೌರವದಿಂದ ನೋಡಲು ಪ್ರಾರಂಭಿಸಿದ್ದೇನೆ. ನನ್ನ ಪತ್ನಿ ಲಲಿತಾಳ ಮನವೊಲಿಸಿ ಆಕೆಯ ಜತೆ ಬದುಕುವುದು ನನ್ನ ಆಶೆ ಎಂದು ಸೂರಜ್ ಹೇಳಿದ್ದಾನೆ.
 
ಆಶಾದೇವಿ ಕೂಡ ಆತ ಕೇವಲ ನನ್ನ ಅಳಿಯ ಅಷ್ಟೇ, ಆದಷ್ಟು ಬೇಗ ನನ್ನ ಪತಿ ಬಳಿ ಮರಳಲು ಬಯಸಿದ್ದೇನೆ. ನಾವು ಮಾಡಿದ್ದು ಘೋರ ತಪ್ಪು ಎಂದು ಪಶ್ಚಾತಾಪವನ್ನು ತೋಡಿಕೊಂಡಿದ್ದಾಳೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದ 52ನೇ ಸಿಜೆಐ ಆಗಿ ನೇಮಕಗೊಂಡ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಹಿನ್ನಲೆ ಇಲ್ಲಿದೆ

Prajwal Revanna: ವಕೀಲರನ್ನೂ ನೇಮಿಸಿಕೊಂಡಿಲ್ಲ: ಪ್ರಜ್ವಲ್ ರೇವಣ್ಣ ಪರಿಸ್ಥಿತಿ ಏನಾಗಿದೆ ನೋಡಿ

PM Modi: ಉಗ್ರರ ದಮನಕ್ಕೆ ಸೇನೆಗೆ ಸಂಪೂರ್ಣ ಪವರ್ ಕೊಟ್ಟ ಪ್ರಧಾನಿ ಮೋದಿ

K Annamalai: ಮೋದಿ, ಅಮಿತ್ ಶಾ ಹೆಸರಲ್ಲಿ ಅಮೆರಿಕದಲ್ಲಿ ಅಣ್ಣಾಮಲೈ ವಿಶೇಷ ಪೂಜೆ

ಉಗ್ರರ ಹಿಮ್ಮೆಟ್ಟಿಸಲು ಐಕ್ಯತೆ ಅವಶ್ಯಕ: ಮಾಜಿ ಪ್ರಧಾನಿ ದೇವೇಗೌಡ

ಮುಂದಿನ ಸುದ್ದಿ
Show comments