Webdunia - Bharat's app for daily news and videos

Install App

ಪಂಜಾಬ್ ಉಗ್ರರ ದಾಳಿ: 75 ಪ್ರಯಾಣಿಕರ ಪ್ರಾಣ ಉಳಿಸಿದ ಚಾಣಾಕ್ಷ ಚಾಲಕ

Webdunia
ಸೋಮವಾರ, 27 ಜುಲೈ 2015 (19:52 IST)
ಇಂದು ಬೆಳಿಗ್ಗೆ ಉಗ್ರರು ಬಸ್ ಮೇಲೆ ದಾಳಿ ಮಾಡಿದಾಗ ಬಸ್ ಚಾಲಕ ತನ್ನ ಚಾಣಾಕ್ಷತೆಯನ್ನು ಮೆರೆದು ಹಲವಾರು ಪ್ರಯಾಣಿಕರ ಪ್ರಾಣ ಉಳಿಸಿ ಶೌರ್ಯವನ್ನು ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. 
 
ಪಂಜಾಬ್ ಸಾರಿಗೆ ಸಂಸ್ಥೆಯ ಚಾಲಕ ನಾನಕ್ ಚಂದ್, ಉಗ್ರರು ಗುಂಡಿನ ದಾಳಿ ಮಾಡಿದರೂ ಹೆದರದೆ ಅವರ ಕಾರಿನ ಮುಂದೆ ಬಸ್ ನುಗ್ಗಿಸುವ ಮೂಲಕ ಅವರನ್ನೇ ಬೆದರಿಸಿದ್ದಾನೆ.  
 
ನಾಲ್ಕು ಮಂದಿ ಉಗ್ರರ ತಂಡ ಬಸ್ ತಮ್ಮತ್ತ ಬರುತ್ತಿರುವುದನ್ನು ಕಂಡು ಹಿಂದಕ್ಕೆ ಹೋಗಿದ್ದರಿಂದ ಬಸ್‌ನ್ನು ವೇಗವಾಗಿ ಚಲಾಯಿಸಿ ಪರಾರಿಯಾಗುವಲ್ಲಿ ಚಾಲಕ ಯಶಸ್ವಿಯಾಗಿದ್ದಾನೆ. 
 
ಬಸ್‌ ಮೇಲೆ ನಿರಂತರವಾಗಿ ಉಗ್ರರು ಗುಂಡು ಹಾರಿಸುತ್ತಿದ್ದರೂ ಲೆಕ್ಕಿಸದೆ ಬಸ್‌ನ್ನು ವೇಗವಾಗಿ ಚಲಾಯಿಸಿಕೊಂಡು ಸರಕಾರಿ ಆಸ್ಪತ್ರೆ ತಲುಪಿದ್ದಾನೆ. ನಂತರ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ಬಸ್‌ನಲ್ಲಿ 75 ಜನ ಪ್ರಯಾಣಿಕರಿದ್ದರು. ಅವರ ಜೀವವನ್ನು ಉಳಿಸುವುದು ಮಹತ್ವದ ಸಂಗತಿ ಎಂದು ನಾನು ಭಾವಿಸಿದೆ. ಆದ್ದರಿಂದ ನಾನು ಬಸ್ ನಿಲ್ಲಿಸಲಿಲ್ಲ ಎಂದು ಚಂದ್ ಸುದ್ದಿಗಾರರಿಗೆ ತಿಳಿಸಿದ್ದಾನೆ.
 
ಬಸ್ ಚಾಲಕನ ಜಾಗ್ರತೆ ಮತ್ತು ಚಾಣಾಕ್ಷತನ 75 ಪ್ರಯಾಣಿಕರ ಜೀವ ಉಳಿಸಿದೆ. ಇಲ್ಲವಾದಲ್ಲಿ ಪ್ರಯಾಣಿಕರು ಉಗ್ರರಿಗೆ ಸುಲಭದ ಟಾರ್ಗೆಟ್ ಆಗುತ್ತಿದ್ದರು ಎಂದು ಪಂಜಾಬ್ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು ಶ್ಲಾಘಿಸಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments