ಭಾರತ-ಪಾಕಿಸ್ತಾನದ ಗಡಿಭಾಗದ ಜಮ್ಮುವಿನಲ್ಲಿ ನಡೆದ ಮಾದರಿಯಲ್ಲೇ ಪಂಜಾಬ್ ಮೇಲೆ ಉಗ್ರರ ದಾಳಿ ನಡೆದಿದೆ ಎಂದು ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಗುರುದಾಸ್ಪುರ್ನ ದೀನಾ ನಗರ್ ಪಟ್ಟಣದಲ್ಲಿ ದಾಳಿ ನಡೆಸಿದ ಉಗ್ರರ ಗುರುತು ಯಾವ ರೀತಿಯಾಗಿರುತ್ತದೆ ಎನ್ನುವುದನ್ನು ನೋಡಲು ತುಂಬಾ ಆಸಕ್ತಿ ಹೊಂದಿದ್ದೇನೆ ಎಂದು ಟ್ಲೀಟ್ ಮಾಡಿದ್ದಾರೆ
ಉಗ್ರರ ದಾಳಿಯ ಸಮಯ, ದಾಳಿಯ ರೀತಿ ಮತ್ತು ದಾಳಿ ಮಾಡಿದ ಸ್ಥಳನ್ನು ನೋಡಿದಲ್ಲಿ ಜಮ್ಮುವಿನಲ್ಲಿ ನಡೆದ ದಾಳಿಯಂತೆ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.
ಗುರುದಾಸ್ಪುರ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಆರು ಮಂದಿ ಮೃತರಾಗಿದ್ದು ಏಳಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.