Webdunia - Bharat's app for daily news and videos

Install App

ಬೆಂಗಳೂರಿನಿಂದ ಪುಣೆಯವರೆಗೆ ಹಿಂಬಾಲಿಸಿ ಕೊಂದ?

Webdunia
ಸೋಮವಾರ, 26 ಡಿಸೆಂಬರ್ 2016 (14:29 IST)
23 ವರ್ಷದ ಟೆಕ್ಕಿ ಅಂತರಾ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಅಂತರಾ ದಾಸ್‌ಳನ್ನು ಅನೇಕ ತಿಂಗಳಿಂದ ಹಿಂಬಾಲಿಸುತ್ತಿದ್ದ ಎಂದು ಆಕೆಯ ತಂದೆ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ. ಮಹಾರಾಷ್ಟ್ರದ ಪುಣೆಯ ಹೊರವಲಯದಲ್ಲಿ ಶುಕ್ರವಾರ ರಾತ್ರಿ 8ಗಂಟೆಗೆ ಅಂತರಾ ಕೊಲೆ ನಡೆದಿತ್ತು.

ಹತ್ಯೆಯಾದ ಯುವತಿ ಅಂತರಾ ದಾಸ್ ಸಾಫ್ಟವೇರ್ ಎಂಜಿನಿಯರ್ ಆಗಿದ್ದು ತತ್ವಾಡೆ ಪ್ರದೇಶದ ಕ್ಯಾಪ್‌ಜಿಮಿನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಫೀಸಿನಿಂದ ಅರ್ಧ ಕೀ.ಮಿ ದೂರದಲ್ಲೇ ಹತ್ಯೆಯಾಗಿದ್ದು ಆಕೆ ಮೂಲತಃ ಪಶ್ಚಿಮ ಬಂಗಾಳದವಳು ಎಂದು ತಿಳಿದು ಬಂದಿದೆ. 
 
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಅಂತರಾ ಎಂದಿನಂತೆ ಕ್ಯಾಬ್ ಮೇಲೆ ಹೋಗದೇ ನಡೆದುಕೊಂಡೇ ಹೋಗಿದ್ದಳು. ಆ ಸಮಯದಲ್ಲಿ ವ್ಯಕ್ತಿಯೊಬ್ಬ ಹರಿತವಾದ ಆಯುಧವನ್ನು ಹಿಡಿದುಕೊಂಡು ಆಕೆಯನ್ನು ಹಿಂಬಾಲಿಸಿಕೊಂಡು ಬಂದ. ಭಯಗ್ರಸ್ತಳಾದ ಆಕೆ ಆತನಿಂದ ತಪ್ಪಿಸಿಕೊಳ್ಳಲು ಜೋರಾಗಿ ಓಡಿದ್ದಾಳೆ. ಆದರೆ ಹಿಂಬಾಲಿಸಿದ ಆತ ಅಟ್ಟಾಡಿಸಿಕೊಂಡು ಅನೇಕ ಬಾರಿ ಇರಿದು ಆಕೆಯನ್ನು ಕೊಂದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
ರಕ್ತದ ಮಡುವಿನಲ್ಲಿ ಬಿದ್ದಿದ್ದ ಐಕೆಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. 
 
ಈ ದುಷ್ಕೃತ್ಯಕ್ಕೆ ಕಾರಣವೇನೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆಕೆಯ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿಲ್ಲವಾದ್ದರಿಂದ ಕೊಲೆಯ ಹಿಂದಿನ ಉದ್ದೇಶ ದರೋಡೆಯಾಗಿರುವುದನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಪೊಲೀಸರ ಪ್ರಕಾರ ದಾಳಿಕೋರ ಅಂತರಾಳಿಗೆ ಪರಿಚಿತನೇ ಆಗಿರಬೇಕು.
 
ಪ್ರಾಥಮಿಕ ವರದಿಗಳ ಪ್ರಕಾರ ಕೊಲೆಗಾರ ಅಂತರಾ ಬೆಂಗಳೂರಿನಲ್ಲಿ ಓದುತ್ತಿದ್ದಾಗ ಆಕೆಯನ್ನು ಭೇಟಿಯಾಗಿದ್ದ ಮತ್ತು ಆಕೆ ಪುಣೆಗೆ ಕೆಲಸಕ್ಕೆ ಸೇರಿದರೂ ಆಕೆಯನ್ನೇ ಹಿಂಬಾಲಿಸಿದ್ದ.
 
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರ ತಂದೆ, ತನ್ನ ಮಗಳು ಕೊಲೆಯಾಗುವವರೆಗೂ ಆಕೆಯ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನನಗೆ ತಿಳಿದು ಬರಲಿಲ್ಲ ಎಂದಿದ್ದಾರೆ.
 
ನನಗೆ ಆಕೆಯ ಸಾವಿನ ಸುದ್ದಿ ಕೇಳಿ ಆಘಾತವಾಯ್ತು. ಆಕೆ ಬುದ್ಧಿವಂತೆ ಮತ್ತು ಧೈರ್ಯಶಾಲಿಯಾಗಿದ್ದಳು. ಆಕೆ ಬೆಂಗಳೂರಿನಲ್ಲಿ ಜಾವಾ ಸ್ಕ್ರಿಪ್ಟ್ ಓದುತ್ತಿದ್ದಾಗ ಯುವಕನೊಬ್ಬ ಆಕೆಯನ್ನು ಕಾಡಿಸುತ್ತಿದ್ದನಂತೆ. ನಿನ್ನೆ ಅಷ್ಟೇ ನನ್ನ ಕಿರಿಯ ಮಗಳಿಂದ ಇದು ನನಗೆ ತಿಳಿದು ಬಂತು ಎನ್ನುತ್ತಾರೆ ಮೃತಳ ತಂದೆ ದೇಬಾನಂದ ದಾಸ್. 
 
ಪ್ರತ್ಯಕ್ಷದರ್ಶಿ ಹೇಳಿರುವ ಪ್ರಕಾರ ಕೊಲೆಗಾರ ನೀಲಿ-ಕಪ್ಪು ಟೀ ಶರ್ಟ್ ಧರಿಸಿದ್ದ. 
 
ಪ್ರಕರಣವನ್ನು ದಾಖಿಲಿಸಿಕೊಂಡಿರುವ ಪೊಲೀಸರು ಹಂತಕನಿಗಾಗಿ ಶೋಧ ನಡೆಸಿದ್ದಾರೆ. ಸದಾ ಕಂಪನಿ ಕ್ಯಾಬ್ ಮೇಲೆ ಮನೆಗೆ ಮರಳುತ್ತಿದ್ದ ಅಂತರಾ ಅಂದು ನಡೆದುಕೊಂಡೇ ಹೋಗಿರುವುದು ಮಾತ್ರ ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಸೇರಿ 5 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ, ಇಲ್ಲಿದೆ ಡೀಟೆಲ್ಸ್‌

ಮುಂಬೈ: ಆಕಾಸ ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಕಾರ್ಗೋ ಟ್ರಕ್‌

ಕಾಫ್ ಸಿರಪ್ ವಿಷಯದಲ್ಲಿ ಕೆಮ್ಮುತ್ತಿರುವ ಬಿಜೆಪಿಯವರು ಪುತ್ತೂರು ಬಿಜೆಪಿ ನಾಯಕನ ಪುತ್ರನ ಪ್ರಕರಣದಲ್ಲಿ ಮೌನವೇಕೆ: ಪ್ರಿಯಾಂಕ್ ಖರ್ಗೆ

ತಮಿಳುನಾಡು, 30 ವರ್ಷಗಳಿಂದ ಬೇಕಾಗಿದ್ದ ಮೋಸ್ಟ್ ವಾಟೆಂಡ್‌ ಭಯೋತ್ಪಾದಕರ ಬಂಧನ

ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಲಿಂಗರಾಜ್ ಬಂಧನವಾಗುತ್ತಿದ್ದ ಹಾಗೇ ಪಕ್ಷದಿಂದ ಉಚ್ಚಾಟನೆ

ಮುಂದಿನ ಸುದ್ದಿ
Show comments