Webdunia - Bharat's app for daily news and videos

Install App

ಆಸ್ಪತ್ರೆಯಲ್ಲಿರುವ ಪ್ರಣಬ್ ಮುಖರ್ಜಿಗೆ ಹಲಸಿನ ಹಣ್ಣು ತಿನ್ನುವ ಆಸೆಯಾಗಿತ್ತಂತೆ!

Webdunia
ಶುಕ್ರವಾರ, 14 ಆಗಸ್ಟ್ 2020 (12:18 IST)
ನವದೆಹಲಿ: ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾಗಿ ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಹಲಸಿನ ಹಣ್ಣು ತಿನ್ನುವ ಆಸೆಯಾಗಿತ್ತಂತೆ! ಆಸ್ಪತ್ರೆಗೆ ದಾಖಲಾಗುವ ಒಂದು ವಾರ ಮೊದಲು ಅವರು ಪುತ್ರನ ಬಳಿ ತಮ್ಮ ಆಸೆ ಹೇಳಿಕೊಂಡಿದ್ದರಂತೆ.


ಸದ್ಯಕ್ಕೆ ಪ್ರಣಬ್ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ. ಆದರೆ ಶಸ್ತ್ರಚಿಕಿತ್ಸೆಗೊಳಗಾಗುವ ಒಂದು ವಾರ ಮೊದಲು ಪುತ್ರ ಅಭಿಜಿತ್ ನನ್ನು ಕರೆದು ತಮ್ಮ ಹಳ್ಳಿಯಿಂದ ಹಲಸಿನ ಹಣ್ಣು ತರಿಸಿಕೊಡು ಎಂದು ಕೇಳಿಕೊಂಡಿದ್ದರಂತೆ. ಹಾಗಂತ ಸ್ವತಃ ಅಭಿಜಿತ್ ಆಂಗ್ಲ ಮಾಧ್ಯಮವೊಂದರ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಅಂತೂ ಆವತ್ತು ಅಭಿಜಿತ್ ಹೇಗಾದರೂ ಮಾಡಿ ಪ್ರಣಬ್ ತವರು ಮಿರಾಟಿಯಿಂದ ಹಲಸಿನ ಹಣ್ಣು ತರಿಸಿ ತಂದೆಗೆ ನೀಡಿದ್ದರಂತೆ. ಆವತ್ತು ಖುಷಿಯಿಂದ ಹಲಸಿನ ಹಣ್ಣು ಸೇವಿಸಿದ್ದ ಪ್ರಣಬ್ ಗೆ ಅದೃಷ್ಟವಶಾತ್ ರಕ್ತದೊತ್ತಡ ಹೆಚ್ಚಾಗಲಿಲ್ಲ ಎಂದು ಅಭಿಜಿತ್ ನೆನೆಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments