Webdunia - Bharat's app for daily news and videos

Install App

ದುರಹಂಕಾರಿಗೆ ತಕ್ಕ ಶಾಸ್ತಿಯಾಗಿದೆ, ಸರ್ವಾಧಿಕಾರಿ ನಗ್ನನಾಗಿದ್ದಾನೆ: ಮೋದಿಗೆ ಪ್ರಕಾಶ್ ರಾಜ್ ಟಾಂಗ್

Krishnaveni K
ಬುಧವಾರ, 5 ಜೂನ್ 2024 (10:40 IST)
ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುತ್ತಿದ್ದರೂ ಮೋದಿ ನೇತೃತ್ವದ ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನ ಸಿಕ್ಕಿಲ್ಲ. ಹೀಗಾಗಿ ನಟ ಪ್ರಕಾಶ್ ರಾಜ್ ಸೋಷಿಯಲ್ ಮೀಡಿಯಾ ಮೂಲಕ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.

ಮೋದಿಯನ್ನು ಸರ್ವಾಧಿಕಾರಿ ಎನ್ನುತ್ತಲೇ ಬಂದಿರುವ ಪ್ರಕಾಶ್ ರಾಜ್ ಈಗ ಬಿಜೆಪಿಗೆ ಬಹುಮತ ಬರದ ಹಿನ್ನಲೆಯಲ್ಲಿ ಟಾಂಗ್ ಕೊಟ್ಟಿದ್ದಾರೆ. ದುರಹಂಕಾರಿಗೆ ತಕ್ಕ ಶಾಸ್ತಿಯಾಗಿದೆ. ಸರ್ವಾಧಿಕಾರಿ ನಗ್ನನಾಗಿದ್ದಾನೆ ಎಂದು ಲೇವಡಿ ಮಾಡಿದ್ದಾರೆ.

‘ಸರ್ವಾಧಿಕಾರಿ ನಗ್ನನಾಗಿದ್ದಾನೆ. ಇದೀಗ ಬೇರೆಯವರ ಬೆಂಬಲದೊಂದಿಗೆ ನಡೆದಾಡುವ ಪರಿಸ್ತಿತಿ ಬಂದಿದೆ. ಇಂತಹ ವ್ಹಕ್ತಿಯ ದುರಹಂಕಾರಕ್ಕೆ ತಕ್ಕ ಶಾಸ್ತಿ ಮಾಡಿ ಆತನ ನಿಜವಾದ ಸ್ಥಾನ ಎಲ್ಲಿ ಎಂದು ತೋರಿಸಿದ್ದಕ್ಕೆ ಇಂಡಿಯಾ ಒಕ್ಕೂಟ ಮತ್ತು ನಾಗರಿಕ ಸಮಾಜಕ್ಕೆ ಧನ್ಯವಾದಗಳು. ನಾವು ನಮ್ಮ ದೇಶಕ್ಕಾಗಿ ಹೋರಾಡಿದೆವು. ಅದನ್ನು ಮುಂದೆಯೂ ಮುಂದುವರಿಸಲಿದ್ದೇವೆ’ ಎಂದಿದ್ದಾರೆ.

ಅಲ್ಲದೆ, ಮೋದಿ ಜನತೆಗೆ ಧನ್ಯವಾದ ಸಲ್ಲಿಸಿ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್ ‘ಆದ್ರೂ ನಿಮ್ಮ ಅಯೋಧ್ಯೆಯಲ್ಲೇ ನಿಮಗೆ ಪ್ರಭು ಶ್ರೀರಾಮ ನಿಮಗೆ ಆಶೀರ್ವಾದ ಮಾಡಲಿಲ್ಲವಲ್ಲ; ಎಂದು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ