Select Your Language

Notifications

webdunia
webdunia
webdunia
webdunia

ಬಿಜೆಪಿ ಸಂಸದೆಯಿಂದಲೇ ರೈಲ್ವೆ ಕಾನೂನು ಬ್ರೆಕ್: ಪೂನಮ್‌ ಮಹಾಜನ್‌ಗಾಗಿ ವಿಶೇಷ ರೈಲು

ಬಿಜೆಪಿ ಸಂಸದೆಯಿಂದಲೇ ರೈಲ್ವೆ ಕಾನೂನು ಬ್ರೆಕ್: ಪೂನಮ್‌ ಮಹಾಜನ್‌ಗಾಗಿ ವಿಶೇಷ ರೈಲು
ಭೋಪಾಲ್ , ಗುರುವಾರ, 2 ಜೂನ್ 2016 (18:32 IST)
ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಸಂಸದೆ ಪೂನಮ್ ಮಹಾಜನ್, ಮುಂಬೈಗೆ ತೆರಳುವ ವಿಮಾನ ಮಿಸ್ ಆಗದಿರಲು ಬೀನಾ ಜಿಲ್ಲೆಯಿಂದ ಭೋಪಾಲ್‌ಗೆ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿರುವುದು ವಿವಾದಕ್ಕೆ ಕಾರಣವಾಗಿದೆ.  
 
ಕಾನೂನಿನ ಪ್ರಕಾರ ಸಂಸದರಿಗಾಗಿ ವಿಶೇಷ ರೈಲಿನ ಸೌಲಭ್ಯವಿರದಿದ್ದಾಗಲೂ ಮಹಾಜನ್‌ಗೆ ವಿಐಪಿ ಗೌರವ ನೀಡಿ ವಿಶೇಷ ರೈಲಿನ ವ್ಯವಸ್ಥೆ ಮಾಡಿರುವುದು ವಿಪಕ್ಷಗಳ ಟೀಕೆಗಳಿಗೆ ಆಹಾರವಾಗಿದೆ.
 
ಭೋಪಾಲ್‌ನ ರೈಲ್ವೆ ವ್ಯವಸ್ಥಾಪಕರು ಮಾತನಾಡಿ, ದಿವಂಗತ ಮಾಜಿ ಕೇಂದ್ರ ಸಚಿವ ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಮ್ ಮಹಾಜನ್‌ಗೆ ಯಾವುದೇ ವಿಐಪಿ ಗೌರವ ನೀಡಿಲ್ಲ ಎಂದು ವರದಿಗಳನ್ನು ತಳ್ಳಿಹಾಕಿದ್ದಾರೆ.  
 
ಸತ್ಯವಾದ ಸಂಗತಿಯೆಂದರೆ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರಿಗಾಗಿ ಭೋಪಾಲ್‌ನಿಂದ ವಿಶೇಷ ರೈಲು ರವಾನಿಸಲಾಗಿತ್ತು ಎಂದು ರೈಲ್ವೆ ಇಲಾಖೆಯ ವ್ಯವಸ್ಥಾಪಕ ಚಂದ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಮರನ್ನು ನಮ್ಮ ಬಡಾವಣೆಗಳಿಂದ ದೂರವಿಡಿ: ವಡೋದರಾ ಹಿಂದೂ ನಿವಾಸಿಗಳಿಂದ ನಗರಸಭೆಗೆ ಪತ್ರ