Webdunia - Bharat's app for daily news and videos

Install App

ಮೋದಿಯಿಂದ ದೇಶಕ್ಕೆ ಬೆದರಿಕೆ: ಕಾಂಗ್ರೆಸ್

Webdunia
ಮಂಗಳವಾರ, 3 ಜನವರಿ 2017 (15:39 IST)
ಪ್ರಧಾನಿ ಮೋದಿ ದೇಶಕ್ಕೆ ಬೆದರಿಕೆಯನ್ನೊಡ್ಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ. 
 

 
ಡಿಸೆಂಬರ್ 31 ರಂದು ಉತ್ತರ ಪ್ರದೇಶದಲ್ಲಿ ಮೋದಿ ನೀಡಿದ್ದ ಪ್ರಚಾರ ಭಾಷಣವನ್ನು ಉಲ್ಲೇಖಿಸಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ಭಾಷಣ ಮಾಡಿದಾಗಲೆಲ್ಲ ಮೋದಿ ದೇಶಕ್ಕೆ ಮತ್ತು ದೇಶದ ಜನರಿಗೆ ಬೆದರಿಕೆ ಒಡ್ಡುವ ಪ್ರಯತ್ನ ಮಾಡುತ್ತಾರೆ. ನೀವು ಡಿಸೆಂಬರ್ 31 ರ ಭಾಷಣವನ್ನೇ ಪರಿಗಣಿಸಿ ನೋಡಿ, ಅವರು ಜನರಿಂದ ಆಯ್ಕೆಯಾದ ಪ್ರತಿನಿಧಿ ಎಂದು ಅನ್ನಿಸುವುದೇ ಇಲ್ಲ. ದೇಶಕ್ಕೆ ಬೆದರಿಕೆ ಒಡ್ಡುವ ಆಕ್ರಮಣಕಾರನ ಹಾಗೆ ಕಾಣಿಸುತ್ತಾರೆ, ಎಂದಿದ್ದಾರೆ. 
 
ದೇಶ ಮತ್ತು ದೇಶದ ಜನರಿಗೆ ಬೆದರಿಕೆ ಒಡ್ಡುವ ಪ್ರಧಾನ ಮಂತ್ರಿಯನ್ನು ಎಲ್ಲಾದರೂ ಕಂಡಿದ್ದೀರಾ? ಬಡವರ ಖಾತೆಗಳಲ್ಲಿ ಠೇವಣಿಯಾಗಿರುವ ಹಣ ಶ್ರೀಮಂತರು ಕೊಟ್ಟಿದ್ದಾಗಿರಬಾರದು. ಪ್ರತಿ ಬಡವ ಕಳ್ಳ ಮತ್ತು ಅವರ ಬ್ಯಾಂಕ್ ಖಾತೆ ಬಾಡಿಗೆಯದ್ದು ಎಂದು ಅವರು ಅಂದುಕೊಂಡಿದ್ದಾರೆಯೇ? ಎಂದು ತಿವಾರಿ ಪ್ರಶ್ನಿಸಿದ್ದಾರೆ.
 
ತಮ್ಮ ಮಾತುಗಳನ್ನು ಮುಂದುವರೆಸಿದ ಅವರು, ಕೆಲವು ಪಕ್ಷಗಳು ಧರ್ಮ, ಜಾತಿಯ ಮೇಲೆ, ಮತ್ತೀಗ ಬಡವ, ಶ್ರೀಮಂತನೆಂಬ ಆಧಾರದ ಮೇಲೆ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ.ಮೋದಿ ಇತರರಲ್ಲಿ ಲೋಪವನ್ನು ಕಂಡುಕೊಳ್ಳಬಲ್ಲರು. ಆದರೆ ಕನ್ನಡಿಯಲ್ಲಿ ತಮ್ಮನ್ನು ತಾವು ಎದುರಿಸಲು ಅವರಿಗೆ ಧೈರ್ಯವಿಲ್ಲ ಎಂದಿದ್ದಾರೆ .

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಂಬ್‌ ಬೆದರಿಕೆ: ನಾಗ್ಪುರ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಲಂಡನ್ ಬೆನ್ನಲ್ಲೇ ಪ್ಯಾರಿಸ್‌ಗೆ ನಿಗದಿಯಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದು

Good News: ಒಂದೇ ದಿನದಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರೀ ಇಳಿಕೆ

ಯೂಟ್ಯೂಬರ್ ವಿಡಿಯೋದಲ್ಲಿ ಸೆರೆಯಾಯಿತು ಸೋನಮ್ ಜತೆಗಿನ ರಾಜಾ ರಘುವಂಶಿ ಕೊನೆ ಕ್ಷಣದ ವಿಡಿಯೋ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ, ಕಾಂಗ್ರೆಸ್ ಹಿರಿಯ ನಾಯಕಿಗೆ ಆಗಿದ್ದೇನು

ಮುಂದಿನ ಸುದ್ದಿ
Show comments