Webdunia - Bharat's app for daily news and videos

Install App

ಟಿವಿಗಳಲ್ಲಿ ಏನ್‌ ಮಾತಾಡ್ತೀರಿ, ಧೈರ್ಯವಿದ್ರೆ ಸಂಸತ್ತಿಗೆ ಬಂದು ಮಾತ್ನಾಡಿ: ಮೋದಿಗೆ ರಾಹುಲ್ ಗಾಂಧಿ

Webdunia
ಮಂಗಳವಾರ, 22 ನವೆಂಬರ್ 2016 (15:57 IST)
ನೋಟ್ ಬ್ಯಾನ್ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟೆಲಿವಿಜನ್‌ನಲ್ಲಿ, ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲು ಸಮಯವಿದೆ. ಆದರೆ ,ಸಂಸತ್ತಿನಲ್ಲಿ ಮಾತನಾಡಲು ಸಮಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  
 
ಪ್ರಧಾನಿ ಮೋದಿಗೆ ಟೆಲಿವಿಜನ್‌ನಲ್ಲಿ ಮಾತನಾಡಲು ಸಮಯವಿದೆ. ಆದರೆ, ದೇಶದ ಸಾಮಾನ್ಯ ಜನತೆ ನೋಟ್ ಬ್ಯಾನ್‌ನಿಂದ ತತ್ತರಿಸಿ ಹೋಗಿದ್ದರೂ ನವದೆಹಲಿಯಲ್ಲಿಯೇ ಇರುವ ಮೋದಿಗೆ ಸಂಸತ್ತಿಗೆ ಆಗಮಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ನವೆಂಬರ್ 8 ರಂದು ಮೋದಿ, 500 ಮತ್ತು 1000 ರೂ, ನೋಟುಗಳಿಗೆ ನಿಷೇಧ ಹೇರಿದಾಗ, ಕೋಟ್ಯಾಂತರ ಜನತೆ ತೊಂದರೆಗೊಳಗಾಗಿದ್ದಾರೆ. ಇವತ್ತಿಗೂ ಎಟಿಎಂಗಳ ಬಳಿ ಜನರು ಸಾಲುಗಟ್ಟಿ ನಿಂತಿದ್ದಾರೆ.ಆದರೆ, ಸರಕಾರಕ್ಕೆ ಜನತೆಯ ಕಷ್ಟ ನಿವಾರಿಸುವ ಯಾವುದೇ ಉದ್ದೇಶವಿಲ್ಲ ಎಂದು ಕಿಡಿಕಾರಿದರು.
 
ದೇಶಾದ್ಯಂತ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುವಂತಹ ಮಹತ್ವದ ನಿರ್ಣಯವನ್ನು ಮೋದಿ, ಕೇವಲ 3-4 ಜನರ ಮುಂದೆ ಚರ್ಚೆ ನಡೆಸಿ ತೆಗೆದುಕೊಂಡಿರುವುದು ವಿಷಾದದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
500 ಮತ್ತು 1000 ರೂ. ನೋಟುಗಳ ನಿಷೇಧದಿಂದ ದೇಶದ ಶೇ.86 ರಷ್ಟು ನಗದು ಹಣ ಕಾಣೆಯಾಗಿದೆ. ಸಾಮಾನ್ಯ ಜನರು ಹಣಕಾಸಿನ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

PM Modi: ರಾಹುಲ್ ಗಾಂಧಿ ಬಂದಾಯ್ತು, ಪ್ರಧಾನಿ ಮೋದಿ ಯಾಕೆ ಇನ್ನೂ ಪಹಲ್ಗಾಮ್ ಸಂತ್ರಸ್ತರ ಭೇಟಿಯಾಗಿಲ್ಲ

Pahalgam Attack: ನಡೆದ ಘೋರ ಘಟನೆಯನ್ನು ಮೃತ ದಿನೇಶ್ ಪತ್ನಿ ವಿವರಿಸಿದಾಗ ಎಂತವರಿಗೂ ಕಣ್ಣೀರು ಬರಬೇಕು

ಗೆಳತಿ ಆಟವಾಡಲು ಸೈಕಲ್ ನೀಡಿಲ್ಲವೆಂದು ಆತ್ಮಹತ್ಯೆಗೆ ಶರಣಾದ 11ರ ಬಾಲಕಿ

ಗಂಡನನ್ನು ಕಳೆದುಕೊಂಡ ನೋವಿನಲ್ಲಿದ್ದ ವಿನಯ್ ನರ್ವಾಲ್‌ ಪತ್ನಿಗೆ ಮತ್ತಷ್ಟು ನೋವು ತಂದುಕೊಟ್ಟ ವೈರಲ್ ವಿಡಿಯೋ

ಯಪ್ಪಾ ಈತ ಯಾವ ಸೀಮೆಯ ಡಾಕ್ಟರ್‌, ನಾಯಿಯನ್ನು ಮಹಡಿಯಿಂದ ಎಸೆದು ಅದರ ನರಳಾಟ ನೋಡುವುದೇ ವೈದ್ಯನಿಗೆ ಖುಷಿ

ಮುಂದಿನ ಸುದ್ದಿ
Show comments