ಆಬ್ಸೆಂಟ್ ಆಗುವ ಸಂಸದರಿಗೆ ಮೋದಿ ಮೇಸ್ಟ್ರು ಶಿಕ್ಷೆ ಕೊಡ್ತಾರೆ!

Webdunia
ಬುಧವಾರ, 22 ಮಾರ್ಚ್ 2017 (09:38 IST)
ನವದೆಹಲಿ: ಪ್ರಧಾನಿಯಾದ ಮೇಲೆ ಸಂಸದರಿಗೂ ಶಿಸ್ತು ರೂಪಿಸಿರುವ ನರೇಂದ್ರ ಮೋದಿ, ಸಂಸತ್ತಿಗೆ ಗೈರು ಹಾಜರಾಗುವ ಸಂಸದರ ಮೇಲೆ ನಿಗಾ ಇಡಲು ಕ್ರಮ ಕೈಗೊಂಡಿದ್ದಾರಂತೆ!

 

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ತಮ್ಮ ಪಕ್ಷದ ಸಂಸದರಿಗೆ ಹೀಗೊಂದು ಎಚ್ಚರಿಕೆ ನೀಡಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಸಭೆಯಲ್ಲಿ ದಯವಿಟ್ಟು ಸಂಸತ್ತಿಗೆ ಎಲ್ಲರೂ ಹಾಜರಾಗಿ ಎಂದು ಮನವಿ ಮಾಡಿದ್ದು, ಪ್ರಧಾನಿ ಮೋದಿಗೆ ಇಷ್ಟವಾಗಲಿಲ್ಲ.

 
ಯಾರಿಗೂ ಮನವಿ ಮಾಡಬೇಕಿಲ್ಲ. ಎಲ್ಲರೂ ಸಂಸದರಾಗಿ ಆಯ್ಕೆಯಾಗಿರುವುದೇ ಸಂಸತ್ತಿನ ಕಲಾಪದಲ್ಲಿ ಭಾಗವಹಿಸುವುದಕ್ಕೆ. ಅಧಿವೇಶನ ಇರುವಾಗ ನಾನು ಏನಾದರೂ ಕೆಲಸಕ್ಕೆ ಯಾವುದೇ ಸಂಸದನ ಹೆಸರು ಬರೆದ ಚೀಟು ಕಳುಹಿಸುತ್ತೇನೆ. ತಕ್ಷಣ ಅವರು ನನ್ನ ಕ್ಯಾಬಿನ್ ಗೆ ಬರಬೇಕು. ಪ್ರತಿಯೊಬ್ಬ ಸಂಸದರ ಮೇಲೆ ನಿಗಾ ಇಡುತ್ತೇನೆ ಎಂದಿದ್ದಾರೆ ಪ್ರಧಾನಿ ಮೋದಿ.

 
ಏನೇ ಇದ್ದರೂ ಸಂಸತ್ತು ಅಧಿವೇಶನ ನಡೆಯುವಾಗ ಸದನದಲ್ಲಿರಲೇಬೇಕು ಎಂದು ಮೋದಿ ಕಟ್ಟಪ್ಪಟ್ಟಣೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದರು ಹೇಳಿದ್ದಾರೆ. ಹೀಗಾಗಿ ಆಬ್ಸೆಂಟ್ ಆಗುವ ಸಂಸದರು ಇನ್ನು ಮುಂದೆ ಹುಷಾರಾಗಿರಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಹಲ್ಗಾಮ್‌ ಭಯೋತ್ಪಾದನಾ ದಾಳಿ: ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪಾರ್ಟಿ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಹೆದರಿ ನಾಲ್ಕನೇ ಫ್ಲೋರ್‌ನಿಂದ ಹಾರಿದ್ರಾ ಯುವತಿ

ಮಹಿಳೆಯರಿರುವುದು ಗಂಡನ ಜತೆ ಮಲಗುವುದಕ್ಕೆ: ಕೇರಳ ಸಿಪಿಎಂ ಮುಖಂಡನ ವಿವಾದಾತ್ಮಕ ಹೇಳಿಕೆ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮುಂದಿನ ಸುದ್ದಿ
Show comments