Webdunia - Bharat's app for daily news and videos

Install App

ಉಪಚುನಾವಣೆ ಸೋಲು ಮೋದಿಗೆ ಮುಸ್ಲಿಮರ ಮೌಲ್ಯ ಅರ್ಥ ಮಾಡಿಸಿತು: ಗೋವಾ ಕಾಂಗ್ರೆಸ್

Webdunia
ಶನಿವಾರ, 20 ಸೆಪ್ಟಂಬರ್ 2014 (11:59 IST)
ಇತ್ತೀಚಿಗೆ ಕೊನೆಗೊಂಡ ಉಪ ಚುನಾವಣೆಯಲ್ಲಿ ತೀವೃ ನಿರಾಶೆಯನ್ನು ಕಂಡ ನಂತರವಷ್ಟೇ  ಪ್ರಧಾನಿ ಮೋದಿಯವರಿಗೆ ಭಾರತೀಯ ಮುಸ್ಲಿಮರ ಮೌಲ್ಯದ ಅರಿವಾಯಿತೇ? ಎಂದು ಗೋವಾ ಕಾಂಗ್ರೆಸ್ ವಕ್ತಾರ ಮತ್ತು ರಾಜ್ಯ ಉರ್ದು ಅಕಾಡೆಮಿ ಮುಖ್ಯಸ್ಥ ಉರ್ಫಾನ್ ಮುಲ್ಲಾ ವ್ಯಂಗ್ಯವಾಡಿದ್ದಾರೆ.  

ಉಪಚುನಾವಣೆ ಫಲಿತಾಂಶದಲ್ಲಿ ಅವಮಾನಕರ ಸೋಲನ್ನು ಕಂಡ ನಂತರ ಭಾರತೀಯ ಮುಸ್ಲಿಮರ ಬೆಲೆ ಏನೆಂದು ಪ್ರಧಾನಿಯವರಿಗೆ ವೇದ್ಯವಾಯಿತು ಎಂದು ಮುಲ್ಲಾ ಹೇಳಿದ್ದಾರೆ.
 
ಕಳೆದ ಗುರುವಾರ ಅಮೇರಿಕಾದ ಸುದ್ದಿವಾಹಿನಿಯೊಂದರ ಜತೆ  ಮಾತನಾಡುತ್ತಿದ್ದ ಪ್ರಧಾನಿ ಮೋದಿ "ನಮ್ಮ ದೇಶದ ಮುಸ್ಲಿಮರ ದೇಶಭಕ್ತಿ ಪ್ರಶ್ನಾತೀತವಾಗಿದೆ. ಅವರು ಭಾರತಕ್ಕಾಗಿ ಬದುಕುತ್ತಾರೆ, ಭಾರತಕ್ಕಾಗಿ ಜೀವ ಕೊಡುತ್ತಾರೆ. ಅವರು ದೇಶಕ್ಕೆ ಯಾವುದೇ ರೀತಿಯ ಅಹಿತವನ್ನು ಬಯಸಲಾರರು. ಭಾರತೀಯ ಮುಸ್ಲಿಮರು ತಮ್ಮ  ಪ್ರಭಾವಕ್ಕೆ ಒಳಗಾಗುತ್ತಾರೆ ಎಂಬುದು ಕೇವಲ ಅಲ್ ಖೈದಾದ ಭ್ರಮೆ" ಎಂದು ಹೇಳಿದ ಹಿನ್ನೆಲೆಯಲ್ಲಿ ಮುಲ್ಲಾ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
 
2014ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ಬಿಜೆಪಿ  ಕಳೆದ ವಾರ ನಡೆದ ಉಪಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ನೀಡಿದೆ. 
 
'ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಕೇಸರಿ ಪಕ್ಷದ ಕೆಲವು ಚುನಾಯಿತ ನಾಯಕರು ನಿರಂತರ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪಿಸಿದ ಮುಲ್ಲಾ "ಭಾರತದ ಮುಸ್ಲಿಮರ ನೈಜತೆ ಬಗ್ಗೆ ಮೋದಿ ತಮ್ಮ ಪಕ್ಷದ ಶಾಸಕರಿಗೆ ಮತ್ತು ಸಂಸದರಿಗೂ ಪಾಠ ಮಾಡಬೇಕು" ಎಂದಿದ್ದಾರೆ.
 
"ಒಬ್ಬ ಮುಸ್ಲಿಮನಾಗಿ ಮೋದಿಯವರ ಈ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ" ಎಂದು ಮುಲ್ಲಾ ಹೇಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments