Select Your Language

Notifications

webdunia
webdunia
webdunia
webdunia

ರೈತರ ಏಳಿಗೆಗಾಗಿ ಒಂದಾಗಿ: ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಮನವಿ

ರೈತರ ಏಳಿಗೆಗಾಗಿ ಒಂದಾಗಿ: ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಮನವಿ
ಬರೇಲಿ , ಸೋಮವಾರ, 29 ಫೆಬ್ರವರಿ 2016 (12:00 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಬರೇಲಿಯಲ್ಲಿ ರವಿವಾರ ರೈತ ಸಮ್ಮೇಳವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ರೈತರ ಏಳಿಗೆ ಎಲ್ಲರೂ ಒಂದಾಗಿ ಎಂದು ರಾಜ್ಯ ಸರ್ಕಾರಗಳಲ್ಲಿ ಮನವಿ ಮಾಡಿದ್ದಾರೆ. 

ನಾನು ಯಾರನ್ನೂ ಟೀಕಿಸಲು ಇಲ್ಲಿಗೆ ಬಂದಿಲ್ಲ. ಬದಲಾಗಿ ನಮ್ಮ ದೇಶದ 75 ನೇ ಸ್ವಾತಂತ್ರ್ಯೋತ್ಸವದ ಸುವರ್ಣ ಸಮಯದಲ್ಲಿ ನಮ್ಮ ರೈತರ ಆದಾಯ ಎರಡುಪಟ್ಟು ಹೆಚ್ಚುವಂತಾಗುವ ಸಾಮಾನ್ಯ ಉದ್ದೇಶದೊಂದಿಗೆ ಕೃಷಿ ಕ್ಷೇತ್ರದ ಏಳಿಗೆಗೆ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸಲು ಎಲ್ಲರೂ ಒಂದಾಗಿ ಎಂದು ರಾಜ್ಯ ಸರ್ಕಾರಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ. 
 
ಬಿಜೆಪಿ ಆಡಳಿತದ ಮಧ್ಯಪ್ರದೇಶ ಸರ್ಕಾರದ ಉದಾಹರಣೆಯನ್ನಿತ್ತ ಪ್ರಧಾನಿ ಕಳೆದ 10 ವರ್ಷದ ಹಿಂದೆ ಟಾಪ್ 10ರಲ್ಲಿ ಇಲ್ಲದ ರಾಜ್ಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ನಾಯಕತ್ವದಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಕೃಷಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು. 

Share this Story:

Follow Webdunia kannada