Webdunia - Bharat's app for daily news and videos

Install App

ದೆಹಲಿ ಜನತೆಯಿಂದ ಸಮ-ಬೆಸ ಸಾರಿಗೆ ಯೋಜನೆ ಜಾರಿ ನಿರ್ಧಾರ: ಕೇಜ್ರಿವಾಲ್

Webdunia
ಸೋಮವಾರ, 25 ಜನವರಿ 2016 (15:41 IST)
ಸಮ-ಬೆಸ ಸಂಖ್ಯೆ ಸಾರಿಗೆ ಯೋಜನೆ ಜಾರಿಯ ಬಗ್ಗೆ ಜನತೆಯ ಅಭಿಪ್ರಾಯ ತಿಳಿಯಲು ನಗರಾದ್ಯಂತ ಜನಸಭಾಗಳನ್ನು ಆಯೋಜಿಸಲಾಗುವುದು, ಜನತೆಯ ಅಭಿಪ್ರಾಯಗಳಿಗೆ ಸ್ಪಂದಿಸಿ ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
 
ಕಳೆದ ಜನೆವರಿ 1 ರಿಂದ 15 ರವರೆಗೆ ಜಾರಿಗೊಳಿಸಲಾಗಿದ್ದ ಸಮ-ಬೆಸ ಸಂಖ್ಯೆ ಸಾರಿಗೆ ಯೋಜನೆ ಕುರಿತಂತೆ ಪ್ರತಿಯೊಬ್ಬ ಆಮ್ ಆದ್ಮಿ ಪಕ್ಷದ ಶಾಸಕ ತನ್ನ ಕ್ಷೇತ್ರದಲ್ಲಿ ಜನಸಭಾ ನಡೆಸಿ ಜನತೆಯ ಅಭಿಪ್ರಾಯಗಳನ್ನು ಪಡೆಯುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. 
 
ಜನತೆ ಯಾವಾಗ ಸಮ-ಬೆಸ ಸಂಖ್ಯೆ ಸಾರಿಗೆ ಯೋಜನೆ ಜಾರಿಗೊಳಿಸಬೇಕು ಎಂದು ಮಾಹಿತಿ ನೀಡಿದಲ್ಲಿ ಅದರಂತೆ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. 
 
ದೆಹಲಿ ಪೊಲೀಸರು, ದೆಹಲಿ ಅಗ್ನಿಶಾಮಕ ದಳ, ಎನ್‌ಸಿಸಿ, ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆ ಪಡೆದ ನಂತರ ಸಿಎಂ ಕೇಜ್ರಿವಾಲ್ ಧ್ವಜಾರೋಹಣ ನೆರವೇರಿಸಿದರು. ನಂತರ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಚಾಲನೇ ನೀಡಲಾಯಿತು.
 
ಸಮ-ಬೆಸ ಸಾರಿಗೆ ಯೋಜನೆ ಜಾರಿಗೆ ತಂದಾಗ ಮಾಲಿನ್ಯ ವೈಪರೀತ್ಯ ನಿಯಂತ್ರಣದಲ್ಲಿತ್ತು. ಮುಂಬರುವ ದಿನಗಳಲ್ಲಿ ಸುಧಾರಿತ ಸಮ-ಬೆಸ ಸಂಖ್ಯೆ ಸಾರಿಗೆ ಯೋಜನೆ ಜಾರಿಗೊಳಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments