Webdunia - Bharat's app for daily news and videos

Install App

ಜೂನ್ 15ರೊಳಗೆ 1500 ಕೋಟಿ ರೂ. ಜಮೆ ಮಾಡದಿದ್ದರೆ ಮತ್ತೆ ಜೈಲಿಗಟ್ಟುತ್ತೇವೆ: ಸುಬ್ರತಾ ರಾಯ್`ಗೆ ಸುಪ್ರೀಂಕೋರ್ಟ್ ಎಚ್ಚರಿಕೆ

Webdunia
ಗುರುವಾರ, 27 ಏಪ್ರಿಲ್ 2017 (18:19 IST)
ಜೂನ್ 15ರೊಳಗೆ ಡೆಡ್ ಲೈನ್ ಅವಧಿ 1500 ಕೋಟಿ ರೂಪಾಯಿ ಪಾವತಿಸದಿದ್ದರೆ ಮತ್ತೆ ಜೈಲಿಗೆ ಕಳುಹಿಸುತ್ತೇವೆ ಎಂದು ಸಹರಾ ಮುಖ್ಯಸ್ಥ ಸುಬ್ರತಾ ರಾಯ್`ಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಜೂನ್ 19ರವರೆಗೆ ಸುಬ್ರತಾ ರಾಯ್ ಪೆರೋಲ್ ವಿಸ್ತರಿಸಿದ ಕೋರ್ಟ್ ಈ ಖಡಕ್ ಎಚ್ಚರಿಕೆ ನೀಡಿದೆ.
 

ಕಳೆದ ಬಾರಿ ಕೋರ್ಟ್`ಗೆ ವಿಚಾರಣೆ ವೇಳೆಯೇ ಕೋರ್ಟ್ ನೀಡಿದ ಮಾರ್ಗ ಸೂಚಿ ಪ್ರಕಾರವೇ ಹಣ ಪಾವತಿಸುತ್ತೇನೆ ಎಂದ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದ ಸುಬ್ರತೋ ರಾಯ್, ತಪ್ಪಿದ್ದಲ್ಲಿ ಜೈಲು ಶಿಕ್ಷೆ ಅನುಭವಿಸುವುದಾಗಿ ಹೇಳಿದ್ದರು. ಜೂನ್ 15 ರೊಳಗೆ 1,500 ಕೋಟಿ ರೂಪಾಯಿ ಮತ್ತು ಜುಲೈ 15ರೊಳಗೆ 522.22 ಕೋಟಿ ರೂಪಾಯಿಯನ್ನ ಸೆಬಿ-ಸಹಾರಾ ಖಾತೆಗೆ ಜಮಾ ಮಾಡುವುದಾಗಿ ಸುಬ್ರತಾ ರಾಯ್ ಪ್ರಮಾಣಪತ್ರ ಸಲ್ಲಿಸಿದ್ದರು. ನಿಗದಿತ ಸಮಯದಲ್ಲಿ ಹಣ ಜಮೆ ಮಾಡದಿದ್ದರೆ ಜೈಲಿಗಟ್ಟುವುದಾಗಿ ಕೋರ್ಟ್ ಎಚ್ಚರಿಸಿತ್ತು.

ಇದೇವೇಳೆ, ಜಸ್ಟೀಸ್ ರಂಜನ್ ಗೋಗೊಯ್ ಮತ್ತು ಎ.ಕೆ. ಸಿಕ್ರಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಹಿಂದಿನ ಆದೇಶದಂತೆ 10 ಕೋಟಿ ರೂ. ಡೆಪಾಸಿಟ್ ಮಾಡಲು ವಿಫಲನಾದ ಚೆನ್ನೈ ಮೂಲದ ಪ್ರಕಾಶ್ ಸ್ವಾಮಿ ಬಂಧನಕ್ಕೆ ಆದೇಶಿಸಿದೆ. ನ್ಯಾಯಾಂಗ ನಿಂದನೆಯಡಿ ಈತನಿಗೆ ಒಂದು ತಿಂಗಳು ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಲ್ತುಳಿತವಾಗುವಾಗ ಮಸಾಲೆ ದೋಸೆ ತಿಂತಿದ್ದ ಸಿಎಂ: ಡಾ ಸಿಎನ್ ಅಶ್ವತ್ಥನಾರಾಯಣ್

ಬಹುಕೋಟಿ ಮದ್ಯ ಹಗರಣ: ಮಾಜಿ ಸಿಎಂ ಭೂಪೇಶ್ ಬಾಘೇಲ್ ಪುತ್ರ ಅರೆಸ್ಟ್‌

ಧರ್ಮಸ್ಥಳ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ: ಸಿದ್ದರಾಮಯ್ಯ

ಫೇಸ್ ಬುಕ್ ನಲ್ಲಿ ಕನ್ನಡ ಅನುವಾದ ಎಡವಟ್ಟು: ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ ಮೆಟಾ

ನವಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ: ವಿಜಯೇಂದ್ರ ಸ್ಪೋಟಕ ಹೇಳಿಕೆ

ಮುಂದಿನ ಸುದ್ದಿ
Show comments