Webdunia - Bharat's app for daily news and videos

Install App

ಅತ್ತೆಯ ಷರತ್ತಿನಿಂದ ಕಂಗಾಲಾದ ಅಳಿಯ ಓಟ ಕಿತ್ತ

Webdunia
ಮಂಗಳವಾರ, 8 ಜುಲೈ 2014 (17:25 IST)
ಮಹಿಳಾ ಪೊಲೀಸ್ ಠಾಣೆಯ ಸಲಹಾ ಕೇಂದ್ರದಲ್ಲೊಂದು ವಿಚಿತ್ರ ಪ್ರಕರಣ ಮುಂದೆ ಬಂದಿತ್ತು. ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಪತಿಗೆ ಆತನ ಅತ್ತೆಯ ಷರತ್ತು ದಂಗುಬಡಿಸಿತ್ತು. 
 
ಈ ದಂಪತಿಗಳಿಬ್ಬರು ಜೊತೆಯಲ್ಲಿ ಇರಲು ಬಯಸುತ್ತಾರೆ. ಆದರೆ ಹೆಂಡತಿಯ ತಾಯಿ ಮಾತ್ರ ತನ್ನ ಅಳಿಯನಿಗೆ ಮಗುವಿನ ಜನನದ ವೇಳೆ ಖರ್ಚಾದ ಹಣ ಕೊಟ್ಟರೆ ಮಾತ್ರ ತನ್ನ ಮಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾಳೆ. ಅಷ್ಟಕ್ಕೂ ಈಕೆ ಖರ್ಚು ಮಾಡಿದ ಹಣವೆಂದರೆ 40 ಸಾವಿರ ರೂಪಾಯಿಯಂತೆ. ಈ ಮೊತ್ತದ ಹಣ ತನಗೆ ನೀಡುವಂತೆ ಅತ್ತೆ ಹೇಳಿದ್ದಾಳೆ. 
 
ಡೆಲಿವರಿಗಾಗಿ ಮಹಿಳೆ ಜನೆವರಿಯಲ್ಲಿ ತವರೂರಾದ ರಾಜ್‌ನಗರದ ತನ್ನ ತಾಯಿ ಮನೆಗೆ ಬಂದಿದ್ದಳು. ಡೆಲಿವರಿಗಾಗಿ ಆಕೆಯ ತಾಯಿ ಸಾಲ ಮಾಡಿದ್ದಳು ಎನ್ನಲಾಗಿದೆ. 
 
ಈಗ ಮಹಿಳೆಯ ತಾಯಿ ಹಣವನ್ನು ಕೊಟ್ಟು ಮಗಳನ್ನು ಕರೆದುಕೊಂಡು ಹೋಗು ಎಂದು ಅಳಿಯನಿಗೆ ಷರತ್ತು ವಿಧಿಸಿದ್ದಾಳೆ. ಆಕೆಯ ಮಗಳು ಕೂಡಾ, ಪತಿ ತನ್ನ ತಾಯಿಗೆ ಹಣ ನೀಡುವವರೆಗೆ ತಾನು ಅವನ ಜೊತೆಗೆ ಹೋಗಲಾರೆ ಎಂದು ಗುಡುಗಿದ್ದಾಳೆ. 
 
ನಾನು ನನ್ನ ತಾಯಿಯನ್ನು ಹೇಗೆ ಬಿಡಲಿ. ತನ್ನ ಪತಿ ಪ್ರತಿ ತಿಂಗಳು ತಾಯಿಗೆ ಮೂರು ಸಾವಿರ ರೂಪಾಯಿ ನೀಡಬೇಕು ಆಗ ಮಾತ್ರ ಅವನ ಜೊತೆ ಬರುವುದಾಗಿ ಹೇಳಿದ್ದಾಳೆ. ನಮ್ಮ ನಡುವೆ ಯಾವುದೇ ರೀತಿಯ ಜಗಳ ಇಲ್ಲ. ತನ್ನ ತಾಯಿಯ ಪೂರ್ತಿ ಹಣ ಲಭಿಸಿದ ಮೇಲೆ ನಾನು ಪತಿಯ ಜೊತೆಗೆ ಖುಷಿ ಖುಷಿಯಾಗಿ ಇರುತ್ತೇನೆ ಎಂದು ಆಕೆ ಪೋಲಿಸರಿಗೆ ತಿಳಿಸಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments