ಜಂಷೆಡ್ ಪುರ್: ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧ ಕ್ರಮ ವಿರೋಧಿಗಳ ವ್ಯಾಪಕ ಟೀಕೆಗೆ ಗುರಿಯಾಗಿರಬಹುದು. ಆದರೆ ಇಲ್ಲೊಬ್ಬ ಪಾನ್ ವಾಲಾ ಮೋದಿ ಬೆಂಬಲಕ್ಕೆ ನಿಂತಿದ್ದಾನೆ. ಹೇಗೆ ಗೊತ್ತಾ?
ಜಂಷೆಡ್ ಪುರದ ಪಪ್ಪು ಸರ್ದಾರ್ ಪಾನ್ ವಾಲಾ. ಮಾಧುರಿ ದೀಕ್ಷಿತ್ ರ ಅಪ್ಪಟ ಅಭಿಮಾನಿ. ಅವರು ಪ್ರಧಾನಿ ಮೋದಿಯವರ ಡಿಜಿಟಲ್ ಮನಿ ಯೋಜನೆಯನ್ನು ಬೆಂಬಲಿಸಿ ತಮ್ಮ ಸುತ್ತಮುತ್ತಲಿನ ಜನರಿಗೆ ಪಾಂಪ್ಲೆಟ್ ಹಂಚುತ್ತಿದ್ದಾರೆ.
“ಪ್ರಧಾನಿ ಮೋದಿ ಭ್ರಷ್ಟಾಚಾರ ತಡೆಗಟ್ಟಲು ಉತ್ತಮ ಕ್ರಮ ಕೈಗೊಂಡಿದ್ದಾರೆ. ಇದನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರದ ಇಂಗಿತ ಒಳ್ಳೆಯದಾದ ಕಾರಣ ನಾವೆಲ್ಲಾ ಇದನ್ನು ಬೆಂಬಲಿಸಬೇಕು” ಎಂದು ಪಾನ್ ವಾಲಾ ಹೇಳಿಕೊಂಡಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ