Select Your Language

Notifications

webdunia
webdunia
webdunia
webdunia

ಪಂಚಾಯತ್ ಚುನಾವಣೆ: ಮತ ಹಾಕದಿದ್ದಕ್ಕೆ ನಾಲಿಗೆಯನ್ನೇ ಕತ್ತರಿಸಿದರು

ಪಂಚಾಯತ್ ಚುನಾವಣೆ: ಮತ ಹಾಕದಿದ್ದಕ್ಕೆ  ನಾಲಿಗೆಯನ್ನೇ ಕತ್ತರಿಸಿದರು
ಲಕ್ನೋ , ಶನಿವಾರ, 13 ಫೆಬ್ರವರಿ 2016 (15:26 IST)
ಉತ್ತರ ಪ್ರದೇಶದಲ್ಲಿ ಅಪರಾಧಗಳು ಹೆಚ್ಚುತ್ತಿರುವುದಕ್ಕೆ ದೃಷ್ಟಾಂತವೆಂಬಂತೆ ಪಂಚಾಯತ್ ಚುನಾವಣೆಯಲ್ಲಿ ಮತ ಹಾಕಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ನಾಲಗೆಯನ್ನೇ ಕತ್ತರಿಸಿದ ಕ್ರೂರ ಘಟನೆ ಝಾನ್ಸಿ ಎಂಬ ಗ್ರಾಮದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಆತನಿಗೆ ಮನಬಂದಂತೆ ಥಳಿಸಿದ ಪರಿಣಾಮ ಕೈ ಮೂಳೆ ಸಹ ಮುರಿದಿದೆ

ರಾಷ್ಟ್ರೀಯ ಸುದ್ದಿಮಾಹಿನಿಯೊಂದರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಪೀಡಿತನನ್ನು ದಿನೇಶ್ ಅರಿಹರ್ ಎಂದು ಗುರುತಿಸಲಾಗಿದೆ. ಆತನ ಮನೆ ಮೇಲೆ ದಾಳಿ ನಡೆಸಿದ ಕೆಲ ಗೂಂಡಾಗಳು ಕುಟುಂಬದ ಸದಸ್ಯರನ್ನು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ದಿನೇಶ್ ನಾಲಿಗೆಯನ್ನು ಕತ್ತರಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ನಾಲಿಗೆಯನ್ನು ಹೊಲೆಯಲಾಗಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಪ್ರಕಾಶ್ ಕರ್ನಭಾಯಿ ಎಂಬಾತ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ತನ್ನ ಕುಟುಂಬದವರು ಮತ ಹಾಕಲು ಹೋಗಿರಲಿಲ್ಲವೆಂದು ಆತ ಕಡೆಯ ಗೂಂಡಾಗಳು ತಮ್ಮ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತು ಪ್ರಕರಣವನ್ನು ದಾಖಲಿಸಿದರೂ ತನಿಖೆಗೆಗೆ ಇನ್ನು ಕೂಡ ಆದೇಶಿಸಿಲ್ಲ ಎಂದು ಆತ ಆರೋಪಿಸಿದ್ದಾನೆ. 
 
ಜಿಲ್ಲಾ ಮಾಜಿಸ್ಟ್ರೇಟ್ ಅನುರಾದ್ ಯಾದವ್ ಬಳಿ ದಿನೇಶ್ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. 
 

Share this Story:

Follow Webdunia kannada