Webdunia - Bharat's app for daily news and videos

Install App

ಕಳೆದ ವಿಘ್ನ: ಒಂದಾಗುತ್ತಿದ್ದಾರೆ ಭಾರತದ ವರ-ಪಾಕ್ ವಧು

Webdunia
ಸೋಮವಾರ, 7 ನವೆಂಬರ್ 2016 (15:14 IST)
ಸುಮಾರು 1 ತಿಂಗಳ ಅನಿಶ್ಚಿತತೆಯ ಬಳಿಕ ಕೊನೆಗೂ ಜೋಧ್ಪುರದ ನರೇಶ್ ತೇವಾನಿ ಇಂದು ಪಾಕ್ ವಧು ಪ್ರಿಯಾ ಬಚ್ಚಾನಿಯವರನ್ನು ಕೈ ಹಿಡಿಯುತ್ತಿದ್ದಾರೆ. 

ಅವರಿಬ್ಬರ ಮದುವೆಗೆ ತಡೆಯಾಗಿದ್ದ ಹಲವಾರು ವಿಘ್ನಗಳು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯಸ್ಥಿಕೆಯಲ್ಲಿ ಬಗೆಹರಿದಿದ್ದು, ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಪ್ರಿಯಾಗೆ ವೀಸಾ ನೀಡಿದ್ದಾರೆ. 
 
ರಾಜಸ್ಥಾನದ ನರೇಶ್‌ಗೆ ಕರಾಚಿಯ ಪ್ರಿಯಾ ಜತೆ ಕಳೆದ ಮೂರು ವರ್ಷಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ನವೆಂಬರ್ 7(ಇಂದು) ಅವರ ಮದುವೆ ನಿಗದಿಯಾಗಿತ್ತು.
 
ಆದರೆ ಭಾರತದ ರಾಯಭಾರಿ ವಧುವಿಗೆ ವೀಸಾ ನೀಡಲು ವಿಳಂಬ ಮಾಡುತ್ತಿದ್ದುದು ಮದುವೆಗೆ ವಿಘ್ನವಾಗಿ ತಲೆದೋರಿತ್ತು. ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಎರಡು ಕಡೆಯವರ ಆತಂಕ ಜಾಸ್ತಿಯಾಗುತ್ತ ಸಾಗಿತ್ತು. ತಮ್ಮ ಸಮಸ್ಯೆಗೆ ಪರಿಹಾರ ನೀಡುವಂತೆ ವರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದ. ವಧು ಸೇರಿದಂತೆ 35 ಜನರಿಗೆ ವೀಸಾ ಪಡೆಯಲು ಸಹಾಯ ಮಾಡಿ ಎಂದು ವಿನಂತಿಸಿದ್ದ. ಆತನ ಮನವಿ ಸ್ಪಂದಿಸಿದ ಸುಷ್ಮಾ ವೀಸಾ ವ್ಯವಸ್ಥೆಯಾಗುವಂತೆ ಮಾಡಿದ್ದಾರೆ.
 
ಸಚಿವೆಯ ತ್ವರಿತ ಸ್ಪಂದನೆಗೆ ಕೃತಜ್ಞತೆಗಳು, ಎಲ್ಲ 35 ಜನ ಭಾರತಕ್ಕೆ ಬಂದಿಳಿದಿದ್ದಾರೆ ಎಂದು ವರ ನರೇಶ್ ಹೇಳಿದ್ದಾನೆ.
 
ಪ್ರಿಯಾ ಮತ್ತು ಆಕೆಯ ಕುಟುಂಬ ಭಾನುವಾರ ಜೋಧ್ಪುರಕ್ಕೆ ಬಂದಿಳಿದಿದ್ದು, ಎಲ್ಲವೂ ಯೋಜಿತ ರೀತಿಯಲ್ಲಿಯೇ ಆಗಿದ್ದಕ್ಕೆ ತುಂಬ ಸಂತೋಷವಾಗುತ್ತಿದೆ. ನಾವು ಮದುವೆ ಉತ್ಸವದಲ್ಲಿ ಮುಳುಗಿದ್ದೇವೆ ಎನ್ನುತ್ತಾಳೆ ಭಾರತದ ಸೊಸೆ ಪೂಜಾ ನಗುತ್ತ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಾಯ್ಲೆಟ್‌ನಲ್ಲಿರುವಾಗಲೇ ಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ, Video Viral

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿಚಾರ ಬಾಯ್ಬಿಟ್ಟರೆ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮುಂದಿನ ಸುದ್ದಿ
Show comments